ಕಾಸರಗೋಡು: ಅಬುದಾಬಿಯಲ್ಲಿ ಕಟ್ಟಡ ದಿಂದ ಬಿದ್ದು ಕಾಸರಗೋಡಿನ ಯುವಕನೋರ್ವ ಮೃತ ಪಟ್ಟ ಬಗ್ಗೆ ವರದಿಯಾಗಿದೆ.
ಪಾಣತ್ತೂರು ಪನತ್ತಡಿಯ ಮುಹಮ್ಮದ್ ಶಮೀಮ್ (24) ಮೃತ ಪಟ್ಟವರು. ಅಬುದಾಬಿ ಸಿಟಿ ವಿಮಾನ ನಿಲ್ದಾಣ ಸಮೀಪದ ಮಳಿಗೆಯೊಂದರಲ್ಲಿ ದುಡಿಯುತ್ತಿದ್ದರು. ರವಿವಾರ ಮುಂಜಾನೆ ಘಟನೆ ನಡೆದಿದೆ.
ಕೆಲಸ ಮುಗಿಸಿ ವಾಸಸ್ಥಳ ಕ್ಕೆ ತೆರಳಿದ್ದು, ಈ ಸಂದರ್ಭದಲ್ಲಿ ಕಟ್ಟಡ ದಿಂದ ಆಕಸ್ಮಿಕವಾಗಿ ಬಿದ್ದು ಈ ದುರ್ಘಟನೆ ನಡೆದಿದೆ.
ರಜೆಯಲ್ಲಿ ಊರಿಗೆ ಬಂದು ವರ್ಷದ ಹಿಂದೆ ಮತ್ತೆ ಆಬುದಾಬಿಗೆ ಮರಳಿದ್ದರು. ಮೃತ ದೇಹವನ್ನು ಊರಿಗೆ ತರುವ ಸಿದ್ಧತೆ ನಡೆಯುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.