ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಆಟೋ ತೋಡಿಗೆ ಉರುಳಿದ ಪರಿಣಾಮ ಕೂಲಿ ಕಾರ್ಮಿಕ ಓರ್ವ ಮೃತಪಟ್ಟು, ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ಮೊಗ್ರಾಲ್ ಪುತ್ತೂರು ಸಮೀಪ ನಡೆದಿದೆ.
ಮೂಲತಃ ಗದಗ ಸಿತಾರಹಳ್ಳಿಯ ಹೊನ್ನಪ್ಪ ಪೂಜಾರ (೩೧) ಮೃತಪಟ್ಟವರು. ನಗರ ಹೊರವಲಯದ ಸೂರ್ಲು ಮೀಪುಗುರಿಯಲ್ಲಿ ವಾಸವಾಗಿದ್ದರು. ಆಟೋ ಚಾಲಕ ಬೆಳ್ಳೂರಿನ ಝುಬೈರ್ (೩೩) ಸೇರಿದಂತೆ ಮೂವರು ಗಾಯಗೊಂಡಿದ್ದಾರೆ .
ಮೊಗ್ರಾಲ್ ಪುತ್ತೂರು – ಕಂಬಾರ್ ರಸ್ತೆಯ ಎಡಚ್ಚೇರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಉರುಳಿ ಬಿದ್ದಿದ್ದು, ಪರಿಸರವಾಸಿಗಳು ಆಟೋದಲ್ಲಿ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದು, ಈ ಪೈಕಿ ಹೊನ್ನಪ್ಪ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ . ಮಾಹಿತಿ ತಿಳಿದು ಹೊನ್ನಪ್ಪ ರವರ ಸಂಬಧಿಕರು ಕಾಸರಗೋಡಿಗೆ ತಲುಪಿದ್ದಾರೆ.