ಕಾಸರಗೋಡು: ವಿದ್ಯಾನಗರದಲ್ಲಿರುವ ಕಾಸರಗೋಡು ಸ್ಟೇಡಿಯಂನಲ್ಲಿ ಕೇರಳ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು.
ಸಂಸದ ರಾಜಮೋಹನ್ ಉಣ್ಣಿತ್ತಾನ್ , ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು , ಸಿ.ಎಚ್.ಕುಂಞ೦ಬು , ಇ.ಚಂದ್ರಶೇಖರನ್ , ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ, ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಅತುಲ್ ಸ್ವಾಮಿನಾಥ್, ಎ ಎಸ್ಪಿ ಪಿ.ಕೆ.ರಾಜು, ಡಿವೈ ಎಸ್ಪಿಗಳಾದ ಪಿ.ಕೆ.ಸುಧಾಕರನ್, ಪಿ.ಬಾಲಕೃಷ್ಣನ್ ನಾಯರ್, ವಿವಿ ಮನೋಜ್ ಡಾ.ವಿ.ಬಾಲಕೃಷ್ಣನ್ ಸಿ.ಕೆ.ಸುನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು ಬಳಿಕ ಪೊಲೀಸ್ , ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್, ಸ್ಥಳೀಯ ಪೊಲೀಸ್, ಮಹಿಳಾ ಪೊಲೀಸ್, ಅಬಕಾರಿ, ವಿದ್ಯಾರ್ಥಿ ಪೊಲೀಸ್ ಕೆಡೆಟ್ಗಳು, ಎನ್ಸಿಸಿ, ರೆಡ್ಕ್ರಾಸ್, ಸ್ಕೌಟ್ ಗಳ ಪಥ ಸಂಚಲನ ನಡೆದವು.
ಕಲರಿ ಪಯಟ್, ರಾಷ್ಟ್ರೀಯ ಏಕೀಕರಣ ಗೀತೆಗಳು, ರಾಷ್ಟ್ರೀಯ ಏಕೀಕರಣ ನೃತ್ಯಗಳು, ಯೋಗ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.