ಕಾಸರಗೋಡು: ಅತೀ ವೇಗದಿಂದ ಬಂದ ಕಾರು ಬಸ್ಸು ತಂಗುದಾಣ ದೊಳಗೆ ನುಗ್ಗಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬುಧವಾರ ಸಂಜೆ ಪುಲ್ಲೂರಿನಲ್ಲಿ ನಡೆದಿದೆ.
ಪುಲ್ಲೂರು ಮಕ್ಕರಕೋಡ್ ನ ಗಂಗಾಧರ (65) ಮೃತ ಪಟ್ಟವರು.
ಪೆರಿಯ ಕಡೆಗೆ ತೆರಳಲು ಬಸ್ಸಿಗಾಗಿ ಕಾಯತ್ತಿದ್ದಾಗ ಅತೀ ವೇಗ ದಿಂದ ಬಂದ ಕಾರು ನುಗ್ಗಿ ಆಅಪಘಾತ ನಡೆದಿದೆ. ಕಾರು ಕಾಸರಗೋಡು ಕಡೆಯಿಂದ ತೆರಳುತ್ತಿತ್ತು ಎನ್ನಲಾಗಿದೆ. ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಲಿಸಿಕೊಂಡಿದ್ದಾರೆ.