ಮಂಜೇಶ್ವರ : ಕತ್ತರ್ ನಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಉಪ್ಪಳ ನಿವಾಸಿ ಯೋರ್ವರು ಮೃತ ಪಟ್ಟ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ. ಉಪ್ಪಳ ಪತ್ವಾಡಿ ಯ ಮುಹಮ್ಮದ್ ಹನೀಫ್ (52) ಮೃತ ಪಟ್ಟವರು. ರಸ್ತೆ ದಾಟು ತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಶನಿವಾರ ರಾತ್ರಿ ಕೆಲಸ ಮುಗಿಸಿ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.
ಗಂಭೀರ ಗಾಯಗೊಂಡ ಹನೀಫ್ ರವರನ್ನು ಆಸ್ಪತೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಹನೀಫ್ ಡಿಸೆಂಬರ್ ತಿಂಗಳಲ್ಲಿ ಕತ್ತರ್ ಗೆ ತೆರಳಿದ್ದು, ಕಂಪೆನಿಯಲ್ಲಿ ಉದ್ಯೋಗ ನಡೆಸುತ್ತಿದ್ದರು.