ಕಾಸರಗೋಡು: ಮನೆಗೆ ನುಗ್ಗಿದ ಕಳ್ಳರು 50 ಪವನ್ ಚಿನ್ನಾಭರಣ ಕಳವು ಗೈದ ಘಟನೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ನಡೆದಿದೆ.
ಪಳ್ಳತ್ತಡ್ಕ ದಲ್ಲಿ ಅಬ್ದುಲ್ ರಜಾಕ್ ರವರ ಮನೆಗೆ ನುಗ್ಗಿ ಕೃತ್ಯ ನಡೆಸಲಾಗಿದೆ. ಎರಡಂತಸ್ತಿನ ಮನೆಯ ಕೆಳ ಅಂತಸ್ತಿನ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಕಪಾಟಿ ನಲ್ಲಿದ್ದ ಚಿನ್ನಾಭರಣ ವನ್ನು ಕಳವು ಮಾಡಲಾಗಿದೆ.
ಅಬ್ದುಲ್ ರಜಾಕ್ ಮತ್ತು ಕುಟುಂಬಸ್ಥರು ಮನೆಗೆ ಬೀಗ ಹಾಕಿ ಎದುರ್ತೋಡು ನಲ್ಲಿರುವ ಪುತ್ರಿ ಮನೆಗೆ ತೆರಳಿದ್ದರು. ಸೋಮವಾರ ಬೆಳಿಗ್ಗೆ ಮನೆಗೆ ಬಂದಾಗ ಮುಂಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಒಳಗಡೆ ಪರಿಶೀಲಿಸಿ ದಾಗ ಕಪಾಟಿ ನಲ್ಲಿರಿಸಿದ್ದ ಚಿನ್ನಾಭರಣ ನಾಪತ್ತೆ ಯಾಗಿರುವುದು ಕಂಡು ಬಂದಿದೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
ಡಿ ವೈ ಎಸ್ಪಿ ಪಿ.ಕೆ ಸುಧಾಕರನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ನೇತೃತ್ವ ನೀಡಿದ್ದಾರೆ. ಬೆರಳಚ್ಚು ತಜ್ಞರು ,ಶ್ವಾನ ದಳ ಮಾಹಿತಿ ತನ್ನು ಕಲೆ ಹಾಕಿದ್ದಾರೆ.