ಕಾಸರಗೋಡು: ಟ್ಯಾಂಕರ್ ಹಾಗೂ ಬುಲೆಟ್ ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಪಯ್ಯನ್ನೂರು ವೆಳ್ಳೂರು ಎಂಬಲ್ಲಿ ನಡೆದಿದೆ.
ಮಂಗಳೂರು ಖಾಸಗಿ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿ ತೃಕ್ಕರಿಪುರ ಎಡಾಟ್ ಮ್ಮಲ್ ನ ಅರ್ಜುನ್(೧೮) ಮೃತಪಟ್ಟವರು.
ಚೆರ್ವತ್ತೂರಿನ ದೇವಸ್ಥಾನವೊಂದರಲ್ಲಿ ನಡೆದ ಉತ್ಸವದಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಪಯ್ಯನ್ನೂರು ಕಡೆಗೆ ತೆರಳುತ್ತಿದ್ದಾಗ ಮುಂದಿನಿಂದ ಬುಲೆಟ್ ಟ್ಯಾಂಕರ್ ನಡುವೆ ಅಪಘಾತ ನಡೆದಿದ್ದು,ಅಪಘಾತದ ರಭಸಕ್ಕೆ ಲಾರಿಯ ಮುಂಭಾಗದ ಚಕ್ರದಡಿ ಸಿಲುಕಿದ್ದ ಬೈಕ್ ಮತ್ತು ಅರ್ಜುನ್ ನನ್ನು ಅಗ್ನಿಶಾಮಕ ದಳದ ಸಿಬಂದಿಗಳು ಹೊರತೆಗೆದರು. ಪಯ್ಯನ್ನೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.