ಕಾಸರಗೋಡು: ವೃದ್ಧ ದಂಪತಿಯ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಈ ಘಟನೆ ಪನತ್ತಡಿ ಯಲ್ಲಿ ಶನಿವಾರ ಸಂಜೆ ನಡೆದಿದೆ.
ಪನತ್ತಡಿ ನಿಲಚ್ಚಾಲ್ ನ ಎನ್ . ಕೃಷ್ಣ ನಾಯ್ಕ್ ( 84) ಮತ್ತು ಪತ್ನಿ ಐತ್ತಮ್ಮ ಬಾಯಿ ( 80) ರವರ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ಮನೆಯಿಂದ ನಾಪತ್ತೆಯಾಗಿದ್ದ ಇಬ್ಬರನ್ನು ಶೋಧ ನಡೆಸಿದಾಗ ಇವರ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.
ಕೃಷ್ಣ ನಾಯ್ಕ್ ಈ ಹಿಂದೆ ಪಂಚಾಯತ್ ಸದಸ್ಯರಾಗಿದ್ದರು. ಆಕಸ್ಮಿಕವಾಗಿ ಕೆರೆಗೆ ಬಿದ್ದಿರಬಹುದು ಸಂಶಯ ವ್ಯಕ್ತವಾಗಿದೆ. ರಾಜಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.