News Karnataka Kannada
Monday, May 06 2024
ಕಾಸರಗೋಡು

ಕಾಸರಗೋಡು: ಮಾದಕ ವಸ್ತು ಸಾಗಟ ಪ್ರಕರಣದ ಆರೋಪಿ ಪೊಲೀಸರಿಂದ  ತಪ್ಪಿಸಿ ಪರಾರಿ

Accused arrested for escaping from police custody
Photo Credit :

ಕಾಸರಗೋಡು: ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆ  ತಂದಿದ್ದಾಗ ಮಾದಕ ವಸ್ತು ಸಾಗಟ  ಪ್ರಕರಣದ ಆರೋಪಿಯೋರ್ವ ಪೊಲೀಸರಿಂದ  ತಪ್ಪಿಸಿ ಪರಾರಿಯಾದ ಘಟನೆ ಬುಧವಾರ  ಕಾಸರಗೋಡಿನಲ್ಲಿ ನಡೆದಿದೆ.

ಅಹಮ್ಮದ್ ಕಬೀರ್ ( ೨೫)  ಪರಾರಿಯಾದ ಆರೋಪಿ. ನ್ಯಾಯಾಲಯ ಪರಿಸರ ದಲ್ಲಿನ ಕ್ಯಾಂಟೀನ್ ಗೆ  ಆಹಾರ ಸೇವಿಸಲು ತೆರಳಿದ್ದ ಸಂದರ್ಭದಲ್ಲಿ ಈತ  ತಪ್ಪಿಸಿ ಪರಾರಿಯಾಗಿದ್ದಾನೆ.

ಪರಾರಿಯಾದವನಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇ ೨೩ ರಂದು  ಕಬೀರ್ ನನ್ನು  ಮಾದಕ ವಸ್ತು ಸಹಿತ ಈತನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದರು. ಗೋವಾದಿಂದ ಎಂ ಡಿ ಎಂ ಎ ಮಾದಕ ವಸ್ತುವನ್ನು ಕಾಸರಗೋಡಿಗೆ ತಲಪಿಸಿ ಮಾರಾಟ ಮಾಡುವ ತಂಡದ ಸೂತ್ರದಾರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ  ನ್ಯಾಯಾಂಗ ಬಂಧನ ವಿಧಿಸಲಾಗಿತ್ತು . ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿದ್ದ ಕಬೀರ್ ನನ್ನು  ಬುಧವಾರ  ಕಾಸರಗೋಡಿಗೆ ಕರೆ ತಂದ ಸಂದರ್ಭದಲ್ಲಿ ಘಟನೆ ನಡೆದಿದೆ.

ತಿಂಗಳ ಹಿಂದೆ ಮಾದಕ ವಸ್ತು ಸಾಗಾಟ ಪ್ರಕರಣದ ಆರೋಪಿಯಾಗಿದ್ದ  ವಿದ್ಯಾನಗರ ಠಾಣಾ ವ್ಯಾಪ್ತಿಯ ಅಮೀರ್ ಅಲಿ ( ೨೩) ಎಂಬಾತ  ನ್ಯಾಯಾಲಯಕ್ಕೆ ಕರೆ ತರುತ್ತಿದ್ದಾಗ ಪೋಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು . ಬಳಿಕ ಈತನನ್ನು ಬೆಂಗಳೂರಿನಿಂದ  ಪೊಲೀಸರು ಬಂಧಿಸಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು