ಕಾಸರಗೋಡು: ಒಂದು ಕಿಲೋ ಚಿನ್ನಾಭರಣ ಸಹಿತ ಕಾಸರಗೋಡು ನಿವಾಸಿಯೋರ್ವನನ್ನು ಕಣ್ಣೂರು ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.
ಮೇಲ್ಪರಂಬದ ಎಂ . ವಿ ಹುಸೈನ್ (೪೨) ಬಂಧಿತ . ಸೋಮವಾರ ದುಬಾಯಿ ನಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಹುಸೈನ್ ನಿಂದ ಚಿನ್ನಾಭರರಣ ವಶಪಡಿಸಿಕೊಳ್ಳಲಾಗಿದೆ.
ಈತನ ಸೂಟ್ ಕೇಸ್ ನ ಬದಿಯನ್ನು ಬೀಡಿಂಗ್ ಮಾದರಿಯಲ್ಲಿ ಪರಿವರ್ತಿಸಿ ಸಾಗಾಟ ಮಾಡಲಾಗುತ್ತಿತ್ತು . ಸಂಶಯ ಗೊಂಡು ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕಳ್ಳ ಸಾಗಾಟ ಪತ್ತೆಯಾಗಿದೆ.