ಕಾಸರಗೋಡು : ಕೆರೆಯಲ್ಲಿ ಮುಳುಗಿ ಯುವಕನೋರ್ವ ಮೃತ ಪಟ್ಟ ಘಟನೆ ರವಿವಾರ ಸಂಜೆ ಕುಂಬಳೆ ಠಾಣಾ ವ್ಯಾಪ್ತಿಯ ಬಂದ್ಯೋಡು ಸಮೀಪದ ಇಚ್ಲಂಗೋಡು ಎಂಬಲ್ಲಿ ನಡೆದಿದೆ.
ಕುಂಬಳೆ ಮಾವಿನ ಕಟ್ಟೆಯ ಜೈನುದ್ದಿನ್ ರವರ ಪುತ್ರ ಸಿನಾನ್ (20) ಮೃತ ಪಟ್ಟವರು. ಇಚ್ಲಂಗೋಡು ಚಿನ್ನ ಮೊಗರ್ ಎಂಬಲ್ಲಿ ಸ್ನೇಹಿತರ ಜೊತೆ ಸ್ನಾನ ಕ್ಕಿಳಿದ ಸಂದರ್ಭ ದಲ್ಲಿ ಈ ಘಟನೆ ನಡೆದಿದೆ.
ಜೊತೆಯಲ್ಲಿದ್ದ ವರು ಹಾಗೂ ಪರಿಸರ ವಾಸಿಗಳು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿ ಸಿ ದರೂ ಆಗಲೇ ಮೃತ ಪಟ್ಟಿದ್ದರು.
ಮೃತ ದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿ ಕರಿಗೆ ಬಿಟ್ಟು ಕೊಡ ಕಾಯಿತು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.