ಕಾಸರಗೋಡು: ಹಾಸನದಲ್ಲಿ ಉಂಟಾದ ಕಾರು ಅಪಘಾತದಲ್ಲಿ ಕಾಸರಗೋಡು ಚೆಂಗಳದ ಯುವಕ ನೋರ್ವ ಮೃತಪಟ್ಟ ಘಟನೆ ನಡೆದಿದೆ.
ಚೆಂಗಳ ನೆಲ್ತಡ್ಕದ ರಾಜೀವ್ ರವರ ಪುತ್ರ ಆದರ್ಶ್(28) ಮೃತಪಟ್ಟವರು. ಹಾಸನದಲ್ಲಿ ಉದ್ಯೋಗ ಲಭಿಸಿದ ಹಿನ್ನಲೆ ಯಲ್ಲಿ ಹಾಸನಕ್ಕೆ ತೆರಳಿದ್ದರು. ಮಾಹಿತಿ ತಿಳಿದು ಸಂಬಂಧಿಕರು ಹಾಸನಕ್ಕೆ ತೆರಳಿದ್ದಾರೆ.