ಕಾಸರಗೋಡು: ಅಪಘಾತಕ್ಕೀಡಾದ ಸ್ಕೂಟರ್ ನಿಂದ 18 ಕಿಲೋ ಗಾಂಜಾವನ್ನು ಮಂಜೇಶ್ವರ ಠಾಣಾ ಪೊಲೀಸರು ವಶಡಿಸಿಕೊಂಡಿದ್ದು, ತಮಿಳುನಾಡು ಮೂಲದ ಯುವಕನೋರ್ವ ನನ್ನು ಬಂಧಿಸಲಾಗಿದೆ. ತಮಿಳುನಾಡು ತಿರುವಲ್ಲೂರಿನ ಅಂತೋನಿ ರಾಜು (26) ಬಂಧಿತ.
ಉಪ್ಪಳದಲ್ಲಿ ಗುರುವಾರ ರಾತ್ರಿ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಸ್ಕೂಟರ್ ಮಗುಚಿ ಬಿದ್ದಿದ್ದು, ಸ್ಥಳೀಯರು ದಾವಿಸಿ ಬಂದು ನೋಡಿದಾಗ ಎರಡು ಗೋಣಿ ಚೀಲಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದ ಗಾಂಜಾ ಪತ್ತೆಯಾಗಿದೆ.
ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಪೊಲೀಸರು ಸ್ಕೂಟರ್ ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಹೊಸಂಗಡಿಯ ಕಿರಣ್ ಎಂಬಾತ ಗಾಂಜಾ ನೀಡಿದ್ದು, ಕಲ್ಲಿಕೋಟೆಗೆ ತಲುಪಿಸಲು ಹೇಳಿದ್ದಾಗಿ ಈತ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.