ಕಾಸರಗೋಡು : ಮನೆಯಂಗಳದಿಂದ ಅಡಿಕೆ ಕಳವುಗೈದ ಘಟನೆಗೆ ಸಂಬಂಧಪಟ್ಟಂತೆ ಬದಿಯಡ್ಕ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಬದಿಯಡ್ಕ ಅಗಲ್ಪಾಡಿಯ ಪ್ರದೀಪ್ ( ೩೦) ಬಂಧಿತ ಆರೋಪಿ . ಅಗಲ್ಪಾಡಿಯ ವಸಂತ ಎಂಬವರ ಅಂಗಳದಲ್ಲಿ ಒಣಗಲು ಹಾಕಲಾಗಿದ್ದ ಅಡಿಕೆಯನ್ನು ಕಳವು ಗೈಯ್ಯಲಾಗಿತ್ತು. ಮೇ ಏಳರಂದು ಘಟನೆ ನಡೆದಿತ್ತು . ಸಿ ಸಿ ಟಿವಿ ದ್ರಶ್ಯದಿಂದ ಆರೋಪಿಯ ಗುರುತು ಪತ್ತೆ ಹಚ್ಚಲಾಗಿತ್ತು . ಬದಿಯಡ್ಕ ಪೊಲೀಸರಿಗೆ ನೀಡಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ