ಕಾಸರಗೋಡು : ಕೊಲ್ಲಂ ನಲ್ಲಿ ನಡೆದ ಬೈಕ್ ಮತ್ತು ಕಾರಿನ ನಡುವಿನ ಅಪಘಾತದಲ್ಲಿ ಕಾ ಞ೦ಗಾಡ್ ನಿವಾಸಿಯಾದ ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ.ಕಾ ಞ೦ಗಾಡ್ ಅಲಾಮಿಪಳ್ಳಿಯ ಚೈತನ್ಯ ( 20 ) ಮತ್ತು ಸಹಪಾಠಿ ಕೊಲ್ಲಂ ಕುಂಡರದ ಬಿ . ಎನ್ ಗೋವಿಂದ್ ( 20) ಮೃತಪಟ್ಟವರು.
ಇಬ್ಬರು ತಿರುವನಂತಪುರ ಸಿ ಇ ಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ . ಕೊಲ್ಲಂ – ಚೆಂಗೋಟ್ ರಾಷ್ಟ್ರೀಯ ಹೆದ್ದಾರಿಯ ಕಾನಿಕ್ಕೋಡ್ ಎಂಬಲ್ಲಿ ಅಪಘಾತ ನಡೆದಿದೆ .
ಪರೀಕ್ಷೆ ಕಳೆದು ಐದು ಬೈಕ್ ಗಳಲ್ಲಿ ಹತ್ತು ಮಂದಿ ಪ್ರವಾಸಕ್ಕೆ ತೆರಳಿ ಮರಳುತ್ತಿದ್ದಾಗ ಒಂದು ಬೈಕ್ ಅಪಘಾತಕ್ಕೀಡಾಗಿದ್ದು , ಕಾರು ಮತ್ತು ಬುಲೆಟ್ ಬೈಕ್ ನಡುವೆ ಅಪಘಾತ ನಡೆದಿದೆ . ಅತೀ ವೇಗದಿಂದ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.