ಕಾಸರಗೋಡು : ಬೆಲೆ ಏರಿಕೆಗೆ ಕಡಿವಾಣ ಹಾಕಲು ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ ಹೋಟೆಲ್ ಗಳಲ್ಲಿ ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ತಪಾಸಣೆ ನಡೆಸಿದರು.
ಚಹಾ , ತಿಂಡಿ ತಿನಿಸುಗಳಿಗೆ ಕೆಲ ಹೋಟೆಲ್ ಗಳಲ್ಲಿ ದುಬಾರಿ ದರ ವಸೂಲು ಮಾಡುತ್ತಿರುವುದು ತಪಾಸಣೆಯಿಂದ ಪತ್ತೆಯಾಗಿದೆ.
ಒಂದು ಗ್ಲಾಸ್ ಚಹಾ ಕ್ಕೆ ೧೨ ರೂ ನಿಂದ ೨೦ ರೂ . ತನಕ ವಸೂಲು ಮಾಡುತ್ತಿರುವುದು. ಚಹಾದ ಬೆಲೆ ಇಳಿಕೆ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದರು ಅಧಿಕಾರಿಗಳಾದ ಕೆ.ಎನ್ ಬಿಂದು, ಪಿ.ವಿ ಶ್ರೀನಿವಾಸನ್, ಸಂಜಯ್, ಸುರೇಶ್ ನಾಯ್ಕ್ ಮೊದಲಾದವರು ತಂಡದಲ್ಲಿದ್ದರು.