ಕಾಸರಗೋಡು : ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವಕನೋರ್ವ ಮೃತಪಟ್ಟ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಶಿರಿಯ ಎಂಬಲ್ಲಿ ನಡೆದಿದೆ.
ರಾವಣೇಶ್ವರ ವಾಣಿಯಂಪಾರ ದ ನಿತೇಶ್ ( ೨೪) ಮೃತಪಟ್ಟ ಯುವಕ . ಕಾರಲ್ಲಿದ್ದ ನಿತೇಶ್ ನ ಸಹೋದರ ಶ್ರವಣ್ ( ೧೪) , ಸಂಬಂಧಿಕರಾದ ರಕ್ಷಿತ್ ( ೨೫) ಅಭಿಷೇಕ್ ( ೨೫) ಮತ್ತು ಲೋಕೇಶ್ ( ೩೫) ಗಾಯಗೊಂಡಿದ್ದು , ಈ ಪೈಕಿ ಶ್ರವಣ್ ಮತ್ತು ರಕ್ಷಿತ್ ಗಂಭೀರ ಗಾಯಗೊಂಡಿದ್ದಾರೆ.
ಸೋಮವಾರ ಮುಂಜಾನೆ ಅಪಘಾತ ನಡೆದಿತ್ತು. ಪುತ್ತೂರು ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಈ ಅಪಘಾತ ನಡೆದಿತ್ತು.
ವಾಹನವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ . ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ