ಕಾಸರಗೋಡು : ಕಾರು ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಆದಿತ್ಯವಾರ ಸಂಜೆ ಚೆಮ್ನಾಡ್ ಸೇತುವೆ ಬಳಿ ನಡೆದಿದೆ .
ಚೆಮ್ನಾಡ್ ನ ಮುಸ್ತಾಕ್ ( ೨೦) ಮೃತಪಟ್ಟವರು. ಚೆಮ್ನಾಡ್ ಕಲರಿಕಾಲ್ ನ ಮುಹಸೀನ್ ( ೨೦) ಗಾಯಗೊಂಡಿದ್ದು , ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ .
ಕಣ್ಣೂರು ಕಡೆಯಿಂದ ಅತೀ ವೇಗದಿಂದ ಬಂದ ಕಾರು ಹಾಗೂ ಎದುರಿನಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ನಡೆದಿದ್ದು , ಗಂಭೀರ ಗಾಯಗೊಂಡ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮುಸ್ತಾಕ್ ಮೃತಪಟ್ಟಿದ್ದಾನೆ . ಇಬ್ಬರು ಐ ಟಿ ಐ ವಿದ್ಯಾರ್ಥಿಗಳಾಗಿದ್ದಾರೆ .
ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.