ಕಾಸರಗೋಡು : ರೂಪಾಯಿಗೆ ಬದಲಾಗಿ ದಿರ್ಹಾಂ ನೀಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಜಾರ್ಖಂಡ್ ಮೂಲದ ಫಾರೂಕ್ ಶೇಕ್ (೩೮) ಎಂದು ಗುರುತಿಸಲಾಗಿದೆ
ವಾರದ ಹಿಂದೆ ನೀಲೇಶ್ವರ ಮಡಕ್ಕರ ಎಂಬಲ್ಲಿ ರೂಪಾಯಿಗೆ ಬದಲಾಗಿ ದಿರ್ಹಾಂ ನೀಡುವುದಾಗಿ ನಂಬಿಸಿ ಹನೀಫ್ ಮತ್ತು ಸೌದಾ ದಂಪತಿಯಿಂದ ಐದು ಲಕ್ಷ ರೂಪಾಯಿ ಪಡೆದಿದ್ದನು.
ದಂಪತಿಯಿಂದ 5 ಲಕ್ಷ ಪಡೆದು ಅದಕ್ಕೆ ಬದಲಾಗಿ ದಿರ್ಹಾಂ ಎಂದು ನಂಬಿಸಿ ಕಾಗದದ ತುಂಡುಗಳನ್ನು ಚೀಲದಲ್ಲಿ ತುಂಬಿಸಿ ದಂಪತಿಗೆ ನೀಡಿ ತಂಡ ಪರಾರಿಯಾಗಿತ್ತು. ಈ ಬಗ್ಗೆ ದಂಪತಿ ಚಂದೇರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಪರಿಸರದ ಸಿಸಿ ಟಿವಿ ಕ್ಯಾಮರಾ ದ್ರಶ್ಯವನ್ನು ಕಲೆ ಹಾಕಿ ತನಿಖೆ ನಡೆಸಿದ್ದು , ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.