News Karnataka Kannada
Monday, April 29 2024
ಕಾಸರಗೋಡು

ದಿರ್ಹಾಂ ನೀಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚಿಸಿದ ಆರೋಪಿ ಬಂಧಿಸಿದ ಪೊಲೀಸರು

New Project 2021 09 09t195206.320
Photo Credit :

ಕಾಸರಗೋಡು : ರೂಪಾಯಿಗೆ ಬದಲಾಗಿ ದಿರ್ಹಾಂ ನೀಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ಪಡೆದು ವಂಚಿಸಿದ  ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಚಂದೇರ  ಪೊಲೀಸರು ಬಂಧಿಸಿದ್ದಾರೆ.  ಬಂಧಿತನನ್ನು  ಜಾರ್ಖಂಡ್ ಮೂಲದ  ಫಾರೂಕ್ ಶೇಕ್ (೩೮)  ಎಂದು ಗುರುತಿಸಲಾಗಿದೆ

ವಾರದ ಹಿಂದೆ ನೀಲೇಶ್ವರ ಮಡಕ್ಕರ ಎಂಬಲ್ಲಿ ರೂಪಾಯಿಗೆ ಬದಲಾಗಿ ದಿರ್ಹಾಂ ನೀಡುವುದಾಗಿ ನಂಬಿಸಿ ಹನೀಫ್  ಮತ್ತು ಸೌದಾ ದಂಪತಿಯಿಂದ ಐದು ಲಕ್ಷ ರೂಪಾಯಿ ಪಡೆದಿದ್ದನು.

ದಂಪತಿಯಿಂದ 5 ಲಕ್ಷ ಪಡೆದು ಅದಕ್ಕೆ ಬದಲಾಗಿ ದಿರ್ಹಾಂ ಎಂದು ನಂಬಿಸಿ ಕಾಗದದ ತುಂಡುಗಳನ್ನು ಚೀಲದಲ್ಲಿ ತುಂಬಿಸಿ ದಂಪತಿಗೆ ನೀಡಿ ತಂಡ ಪರಾರಿಯಾಗಿತ್ತು. ಈ ಬಗ್ಗೆ ದಂಪತಿ ಚಂದೇರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ  ಪೊಲೀಸರು ಪರಿಸರದ ಸಿಸಿ ಟಿವಿ ಕ್ಯಾಮರಾ ದ್ರಶ್ಯವನ್ನು ಕಲೆ ಹಾಕಿ ತನಿಖೆ ನಡೆಸಿದ್ದು , ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು