ಕಾಸರಗೋಡು: ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪಿ . ಕೆ ಫೈಸಲ್ ಶನಿವಾರ ಕಾಸರಗೋಡು ವಿದ್ಯಾನಗರದಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪದಗ್ರಹಣ ಮಾಡಿದರು. ಕೆ ಪಿ ಸಿ ಸಿ ಅಧ್ಯಕ್ಷ ಕೆ . ಸುಧಾಕರನ್ ಸಮ್ಮುಖದಲ್ಲಿ ಹಾಲಿ ಅಧ್ಯಕ್ಷ ಹಕೀಮ್ ಕುನ್ನಿಲ್ ರವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ . ಸುಧಾಕರನ್ ರವರು , ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷವನ್ನು ಮುನ್ನೆಡಸಲು ಎಲ್ಲರೂ ಮುಂದೆಬರಬೇಕು . ಯಾವುದೇ ಅತೃಪ್ತಿ ಇದ್ದರೂ ಬಹಿರಂಗವಾಗಿ ವ್ಯಕ್ತಪಡಿಸದೆ ಪಕ್ಷದ ಸಭೆಯಲ್ಲಿ ಅಭಿಪ್ರಾಯ ಮಂಡಿಸಬೇಕು . ಈಗ ಇರುವ ಅತೃಪ್ತಿ ಶಮನ ಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.ಪಕ್ಷವವನ್ನು ತಳಮಟ್ಟದಿಂದ ಬಲಿಷ್ಠಗೊಳಿಸಿ ಅಧಿಕಾರಕ್ಕೆ ತರಲು ಎಲ್ಲರೂ ಮುಂದೆ ಬರಬೇಕು ಎಂದು ಕರೆ ನೀಡಿದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಕೆ ಪಿ ಸಿ ಸಿ ಕಾರ್ಯದರ್ಶಿ ಕೆ.ಪಿ.ಕುಂಞಿ ಕಣ್ಣನ್, .ಸಿ.ಕೆ.ಶ್ರೀಧರನ್, .ಗೋವಿಂದನ್ ನಾಯರ್ , ಶಾಸಕ ಎನ್.ಎ.ನೆಲ್ಲಿಕುನ್ನು, ಎ . ಕೆ . ಎಂ ಆಶ್ರಫ್ , ಮುಖಂಡರಾದ ಬಾಲಕೃಷ್ಣ ಪೆರಿಯ , ಸೋಮಶೇಖರ ಜೆ . ಎಸ್ , ಡಾ . ಖಾದರ್ ಮಾಂಗಾಡ್ ಹಾಗೂ
ಮಾಜಿ ಸಚಿವ ಸಿ.ಟಿ.ಅಹಮ್ಮದಾಲಿ ಹಾಗೂ ಇನ್ನಿತರ ಕಾಂಗ್ರೆಸ್ ನ ಮುಖಂಡರು ಉಪಸ್ಥಿತರಿದ್ದರು.
ಮಾಜಿ ಸಚಿವ ಸಿ.ಟಿ.ಅಹಮ್ಮದಾಲಿ ಹಾಗೂ ಇನ್ನಿತರ ಕಾಂಗ್ರೆಸ್ ನ ಮುಖಂಡರು ಉಪಸ್ಥಿತರಿದ್ದರು.