ಬಾಗಲಕೋಟೆ: ಮುಧೋಳ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅದೋಗತಿಗೆ ತಲುಪಲು. ಕೋಟ್ಯಂತರ ರೂ. ನಷ್ಟವಾಗಲು ಆಡಳಿತ ಮಂಡಳಿ ನೇರ ಹೊಣೆಯಾಗಿದೆ. ಕಾರ್ಖಾನೆ ದಿವಾಳಿಯಲ್ಲಿ ಸಚಿವ ಗೋವಿಂದ ಕಾರಜೋಳ ಪಾತ್ರವಿದೆ. ಹಗರಣದ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಆಗ್ರಹಿಸಿದರು.
ಕಾರ್ಖಾನೆ ದಿವಾಳಿಗೆ ಅಧ್ಯಕ್ಷ ರಾಮಣ್ಣ ತಳೇವಾಡ ಹಾಗೂ ಆಡಳಿತ ಮಂಡಳಿ ನೇರವಾಗಿ ಕಾರಣರಾಗಿದ್ದಾರೆ. ಸಚಿವ ಗೋವಿಂದ ಕಾರಜೋಳ ಸರ್ಕಾರದಲ್ಲಿದ್ದುಕೊಂಡು ಸುಮ್ಮನೆ ಕೂಡುವುದು ತರವಲ್ಲ. ಸಾವಿರಾರು ರೈತರು, ಶೇರುದಾರರು, ಕಾರ್ಮಿಕರ ಹಿತ ಅಡಗಿದೆ. ರನ್ನ ಕಾರ್ಖಾನೆ ದಿ.ಎಸ್.ಟಿ.ಪಾಟೀಲ ಅವರ ಕನಸ್ಸಿನ ಕೂಸು. ಕ್ಷೇತ್ರದ ಜನರ ಒಳಿತಿಗಾಗಿ 2.20 ಕೋಟಿ ರೂ.ಶೇರು ಸಂಗ್ರಹಿಸಿದರು. ಅನೇಕ ರೈತರು ತಮ್ಮ ಮನೆಯಲ್ಲಿರುವ ಬಂಗಾರ ಅಡವಿಟ್ಟು ಹಣ ನೀಡಿದ್ದಾರೆ. ಇದೀಗ 19 ಸಾವಿರ ಷೇರುದಾರರ ಕಾಳಜಿ ಮಾಡುವವರು ಯಾರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಚಿವ ಗೋವಿಂದ ಕಾರಜೋಳ ಅವರಿಗೆ ಪ್ರಶ್ನೆಗಳ ಸುರಿಮಳೆ ಗೈದರು.
ಕಾರ್ಖಾನೆಗಾಗಿ ಡಿಸಿಸಿ ಬ್ಯಾಂಕ್ನಿOದ 80 ಕೋಟಿ, ಅಪೇಕ್ಸ್ ಬ್ಯಾಂಕ್ನಿAದ 72 ಕೋಟಿ ರೂ. ಯೂನಿಟ್ ಬ್ಯಾಂಕ್ನಿ0ದ 62 ಕೋಟಿ ರೂ. ಸರ್ಕಾರದಿಂದ 36 ಕೋಟಿ ರೂ. ಸಾಲ ಪಡೆದುಕೊಳ್ಳಲಾಗಿದೆ. ಇದೆಲ್ಲವು ಸಚಿವ ಕಾರಜೋಳ ಅವರಿಗೆ ಗೊತ್ತಿದೆ. ತಮ್ಮನ್ನು ಇದರಲ್ಲಿ ಎಳೆಯಬೇಡಿ ಎಂದರೇ ಹೇಗೆ? ಕಳೆದ 17 ವರ್ಷಗಳಿಂದ ಗೋವಿಂದ ಕಾರಜೋಳ ಅವರ ಚಾಲಕನಿಗೆ ಕಾರ್ಖಾನೆಯಿಂದ ಸಂಬಳ ನೀಡಲಾಗಿದೆ. ಈ ಬಗ್ಗೆ ದಾಖಲಾತಿ ಕೊಡುವೆ. ಸಕ್ಕರೆ ಕಾರ್ಖಾನೆ ಕುರಿತು ಗೋಲ್ಮಾಲ್ ತನಿಖೆ ಮಾಡಬೇಕು. ಆಡಳಿತ ಮಂಡಳಿಯವರನ್ನು ಒಳಗೆ ಹಾಕಬೇಕು. ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರಿಗೆ ಶಿಕ್ಷೆಗೆ ಒಳಪಡಿಸಬೇಕು. ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಇದರಲ್ಲಿ ಭಾಗವಹಿಸಿ ರೈತರ ಕಾಪಾಡಬೇಕು. ಎಂದು ಮನವಿ ಮಾಡಿದರು.
ಮುಧೋಳ ತಾ.ಪಂ ಮಾಜಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಮುಖಂಡರಾದ ಸಂಜೀವ ನಾಯಕ, ಗುರುರಾಜ ಉದುಪುಡಿ, ಲೋಕಣ್ಣ ಕೊಪ್ಪದ ಸುದ್ದಿಗೋಷ್ಠಿಯಲ್ಲಿ ಇದ್ದರು.