ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಕುಂಬಳೆ – ಕಾಸರಗೋಡು ನಡುವಿನ ಮೊಗ್ರಾಲ್ ಪುತ್ತೂರಿನಲ್ಲಿ ಚಿನ್ನಾಭರಣ ಸಾಗಾಟ ಏಜಂಟ್ ರ ಮೇಲೆ ಹಲ್ಲೆ ನಡೆಸಿ 65 ಲಕ್ಷ ರೂ. ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಕಾಸರಗೋಡು ಡಿ ವೈ ಎಸ್ಪಿ ಪಿ . ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತರನ್ನು ತೃಶ್ಯೂರು ಎಳತುರುರ್ತಿಯ ಬಿನೋಯ್ ಬೇಬಿ ( 25) , ನಡವಯಲ್ ನ ಅಖಿಲ್ ಟೋಮಿ ( 24) ಮತ್ತು ವಯನಾಡು ಪುಳ್ಪಲ್ಲಿಯ ಅನು ಶಾಜು ( 28) ಎಂದುಗುರುತಿಸಲಾಗಿದೆ . ಮೂವರನ್ನು ತೃಶ್ಯೂರಿನಿಂದ ಬಂಧಿಸಲಾಯಿತು.
ಬಂಧಿತರನ್ನು ತೃಶ್ಯೂರು ಎಳತುರುರ್ತಿಯ ಬಿನೋಯ್ ಬೇಬಿ ( 25) , ನಡವಯಲ್ ನ ಅಖಿಲ್ ಟೋಮಿ ( 24) ಮತ್ತು ವಯನಾಡು ಪುಳ್ಪಲ್ಲಿಯ ಅನು ಶಾಜು ( 28) ಎಂದುಗುರುತಿಸಲಾಗಿದೆ . ಮೂವರನ್ನು ತೃಶ್ಯೂರಿನಿಂದ ಬಂಧಿಸಲಾಯಿತು.
ಸಿ ಸಿ ಟಿ ವಿ ದ್ರಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖ್ಯೆನಿಂದ ಮೂವರು ಆರೋಪಿಗಳನ್ನು ಬಂಧಿಸಲಾಯಿತು ಸೆ. 22 ರಂದು ಘಟನೆ ನಡೆದಿತ್ತು . ಮಹಾರಾಷ್ಟ್ರ ಮೂಲದ ಚಿನ್ನಾಭರಣ ಸಾಗಾಟ ಏಜಂಟ್ ಮೇಲೆ ಹಲ್ಲೆ ನಡೆಸಿ ನಗದನ್ನು ದರೋಡೆಮಾಡಲಾಗಿತ್ತು . ಪ್ರಕರಣ ದಾಖಲಿಸಿಕೊಂಡಿದ್ದ ಕಾಸರಗೋಡು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆನಡೆಸಿದ್ದರು . ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಿಂದ ಸಿ ಸಿ ಟಿ ವಿ ದ್ರಶ್ಯಗಳನ್ನು ಕಲೆ ಹಾಕಿದ್ದರು . ಇದರಿಂದ ಕೆಲ ಮಾಹಿತಿಗಳು ಲಭಿಸಿದ್ದರು . ದರೋಡೆಗೆ ಬಳಸಿದ್ದ ಕಾರು ಹಾಗೂ ಆರೋಪಿಗಳ ಚಿತ್ರಣ ಲಭಿಸಿತ್ತು . ಇದನ್ನು ಕೇಂದ್ರೀಕರಿಸಿ ತನಿಖೆಯನ್ನು ಕಣ್ಣೂರು , ವಯನಾಡು, ತೃಶ್ಯೂರು ಜಿಲ್ಲೆಗೆ ವಿಸ್ತರಿಸಲಾಗಿತ್ತು . ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು ತೃಶ್ಯೂರಿನಿಂದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳಿದ ಆರೋಪಿಗಳ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳ ಬಗ್ಗೆ ಮಾಹಿತಿ ಲಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನಾಳೆ ( ಗುರುವಾರ ) ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ತನಿಖೆ ಕಸ್ಟಡಿಗೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ