ಕಾಸರಗೋಡು : ರಸ್ತೆಗಡ್ಡವಾಗಿ ಬಂದ ಕಾಡಹಂದಿಗೆ ಬಡಿದ ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಸವಾರ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಮುಳ್ಳೇರಿಯ ಸಮೀಪದ ಕರ್ಮಂತ್ತೋಡಿಯಲ್ಲಿ ನಡೆದಿದೆ.
ಕರ್ಮತ್ತೋಡಿ ಕಾವುಂಗಾಲ್ ನ ಕುಞ೦ಬು ನಾಯರ್ ( ೬೦) ಮೃತಪಟ್ಟವರು. ಬೆಳಿಗ್ಗೆ ಮುಳ್ಳೇರಿಯ ಪೇಟೆಗೆ ತೆರಳಿ ಮನೆಗೆ ಮರಳುತ್ತಿದ್ದಾಗ ಕರ್ಮಂತ್ತೋಡಿಯಲ್ಲಿ ಕಾಡುಹಂದಿಯು ರಸ್ತೆಗಡ್ಡವಾಗಿ ಓಡಿದ್ದು , ಸ್ಕೂಟರ್ ಹಂದಿಗೆ ಬಡಿದಿದೆ. ನಿಯಂತ್ರಣ ತಪ್ಪಿದ ಸ್ಕೂಟರ್ ಮಗುಚಿ ಬಿದ್ದಿದ್ದು , ರಸ್ತೆಗೆಸೆಯಲ್ಪಟ್ಟ ಕುಞ೦ಬು ನಾಯರ್ ಗಂಭೀರ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಮುಳ್ಳೇರಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು . ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ಮೃತಪಟ್ಟರು .
ಸ್ಕೂಟರ್ ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಕಾಡ ಹಂದಿ ಕೂಡಾ ಸ್ಥಳದಲ್ಲೇ ಮೃತಪಟ್ಟಿದೆ.
ಘಟನಾ ಸ್ಥಳಕ್ಕೆ ಅರಣ್ಯ ಪಾಲಕರು , ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು . ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ