ಮಂಗಳೂರು: ಮಂಗಳೂರು ಸಿಎಆರ್ ತುಕಡಿಯ ಹೆಡ್ ಕಾನ್ಸ್ಟೇಬಲ್. ಸೋಮನಗೌಡ ಚೌದರಿ (31) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇನ್ಸ್ಪೆಕ್ಟರ್ ಒಬ್ಬರಿಗೆ ಡ್ರೈವರ್ ಆಗಿದ್ದ ಸೋಮನಗೌಡ, ತನ್ನ ಮೇಲಾಧಿಕಾರಿಗೆ ಜ್ವರ ಅಂತಾ ಆಸ್ಪತ್ರೆಗೆ ಬಿಟ್ಟು ಜೀಪ್ ಬಳಿ ಬಂದಾಗ ಹೃದಯಾಘಾತವಾಗಿದೆ. ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದರು ಅಷ್ಟೋತ್ತಿಗೆ ಸೋಮನಗೌಡ ಸಾವನ್ನಪ್ಪಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು , ಇಂದು ಮಂಗಳೂರಿನಲ್ಲೇ ಸೋಮನಗೌಡ ಅಂತ್ಯಕ್ರಿಯೆ ನಡೆಯಲಿದೆ.
ಕೋವಿಡ್ ಸಂದರ್ಭದಲ್ಲಿ ಸ್ವಂತ ಹಣದಿಂದ ಬಡವರಿಗೆ ರೇಷನ್ ಹಂಚಿದ್ದ ಸೋಮನಗೌಡ, ವರ್ಷಕ್ಕೆ ಎರಡು ಭಾರೀ ರಕ್ತದಾನ ಮಾಡುತ್ತಿದ್ದರು.