ಬೆಳ್ತಂಗಡಿ: ದೀಪಗಳ ಹಬ್ಬ ದೀಪಾವಳಿ ಮತ್ತೊಮ್ಮೆ ಬಂದಿದೆ. ದೀಪಗಳ ಹಬ್ಬಗಳಲ್ಲಿ ದೀಪಗಳಿಗಿಂತ ಹೆಚ್ಚಾಗಿ ಪಟಾಕಿಗಳ ಶಬ್ದವೇ ಕೇಳುತ್ತದೆ. ಪಟಾಕಿಗಳ ಹಾವಳಿಯಿಂದ ಪರಿಸರ ಮಾಲಿನ್ಯಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಹಾಗೂ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಶ್ರೀ.ಧ.ಮಂ.ಆಂಗ್ಲಮಾಧ್ಯಮ ಶಾಲೆ(ರಾಜ್ಯ ಪಠ್ಯಕ್ರಮ)ಯ ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಶಾಲೆಯಿಂದ ಉಜಿರೆ ಪೇಟೆಯವರೆಗೆ “ನಮ್ಮ ಚಿತ್ತ ಮಾಲಿನ್ಯರಹಿತ, ಹಸಿರು ದೀಪಾವಳಿಯತ್ತ ಎಂಬ ಘೋಷಣೆಯೊಂದಿಗೆ ಜಾಥಾವನ್ನು ನಡೆಸಿದರು.
ಈ ಕಾರ್ಯಕ್ರಮಕ್ಕೆ ಶ್ರೀ ಧ. ಮಂ.ವಿದ್ಯಾ ಸಂಸ್ಥೆಗಳ ಆಡಳಿತ ಅಧಿಕಾರಿಯಾಗಿರುವ ಶಶಿಧರ ಶೆಟ್ಟಿ ಇವರು ಚಾಲನೆ ನೀಡಿದರು.
ಹಾಗೇ ಉಜಿರೆ ಪೇಟೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಪಟಾಕಿಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಎಲ್ಲಾ ಸಹಶಿಕ್ಷಕರು ಪಾಲ್ಗೊಂಡರು.
ಜೊತೆಗೆ ಶ್ರೀ.ಧ.ಮ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಸ.ಹಿ.ಪ್ರಾ.ಶಾಲೆ ಮುಂಡತ್ತೋಡಿ ಉಜಿರೆ ಹಾಗೂ ಸ.ಪ್ರೌಢಶಾಲೆ ಹಳೆಪೇಟೆಗೂ ಭೇಟಿ ನೀಡಿ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಿದರು.