ಉಡುಪಿ:ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ವಿರೋಧವಿದೆ. ಟಿಪ್ಪು ಕ್ರೌರ್ಯದ ಸಂಕೇತ, ಟಿಪ್ಪು ಕನ್ನಡ ವಿರೋಧಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
ಸೋಮವಾರ ಮಾದ್ಯಮದವರ ಜೊತೆ ಮಾತನಾಡಿದ ಅವರು, ಧರ್ಮಾಂಧನ ಜಯಂತಿ ಮಾಡಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತೆ. ಸರಕಾರ ಟಿಪ್ಪು ಜಯಂತಿ ಕೈ ಬಿಡಬೇಕು. ಸಿದ್ದರಾಮಯ್ಯ ಸವಾಲು ಹಾಕಿ ಟಿಪ್ಪು ಜಯಂತಿ ಆಚರಿಸಿದ್ರು. ಜನರು ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿದರು.
ಜಯಂತಿ ಆಚರಿಸಿದ್ರೆ ರಾಜ್ಯಾದ್ಯಂತ ವಿರೋಧ ಎದುರಿಸಬೇಕಾಗುತ್ತೆ. ರಾಜ್ಯ ಮುಖ್ಯ ಕಾರ್ಯದರ್ಶಿ ಗೆ ಪತ್ರ ಬರೆದಿದ್ದೇನೆ. ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಪ್ರಕಟಿಸಬೇಡಿ. ಆಮಂತ್ರಣ ಪತ್ರಿಕೆಯಲ್ಲಿ ಬಿಜೆಪಿ ಯಾವ ನಾಯಕರ ಹೆಸರೂ ಬೇಡ. ಉಡುಪಿ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದ್ದೇನೆ ಎಂದು ಕೋಟ ಹೇಳಿದರು.
ರಾಜ್ಯ ಸರ್ಕಾರದ ಮಾನಸಿಕತೆ ವಿಚಿತ್ರವಾಗಿದೆ. ಟಿಆರ್ ಶಾಮಣ್ಣ ರಸ್ತೆಯನ್ನ ಗಫೂರ್ ರಸ್ತೆ ಅಂತ ಬಿಬಿಎಂಪಿ ಬದಲಾಯಿಸುತ್ತದೆ. ಅಲ್ಪಸಂಖ್ಯಾತ ರ ಮತ ಪಡೆಯಲು ಟಿಪ್ಪು ಜಯಂತಿಯ ನಾಟಕವಾಡುತ್ತಿದೆ. ಅಲ್ಪಸಂಖ್ಯಾತ ರ ಬಗ್ಗೆ ಒಳ್ಳೇ ಅಭಿಪ್ರಾಯ ಇದ್ರೆ ಸಾಚಾರ್ ವರದಿಗೆ ಗಮನ ಕೊಡಿ. ಟಿಪ್ಪು ಜಯಂತಿ ಮಾಡ್ದೆ ಇದ್ರೆ ಸಿದ್ದರಾಮಯ್ಯ ಹೆದರಿಕೆ ಸಿಎಂ ಗೆ ಇದೆ. ಬೆಂಬಲ ಹಿಂದೆ ಪಡಿತಾರೆ ಅಂತ ಕುಮಾರಸ್ವಾಮಿ ಗೆ ಭಯ ಎಂದು ಕೋಟ ವ್ಯಂಗ್ಯವಾಡಿದರು.