ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಚುನಾಣಾಧಿಕಾರಿಗೆ ದೂರು ನೀಡಿದೆ.
‘ರಾತ್ರಿ ಮೂರು ಗಂಟೆಗೆ ಶತ್ರು ದೇಶಕ್ಕೆ ನುಗ್ಗಿ ಹೊಡೆಯುವಂತೆ ಆದೇಶ ನೀಡುವವರಿಗೆ ಮತ ಹಾಕಬೇಕೇ ಹೊರತು, ರಾತ್ರಿ 3 ಗಂಟೆಗೆ ಉಗ್ರರಿಗಾಗಿ ಸುಪ್ರೀಂ ಕೋರ್ಟ್ ನ ಬಾಗಿಲು ತೆರೆಸುವವರಿಗಲ್ಲಾ..ಮೋದಿ ಮತ್ತೊಮ್ಮೆ ಎಂದು ಟ್ವೀಟ್ ಮಾಡಿದ ನಳಿನ್ ವಿರುದ್ಧ ಕಾಂಗ್ರೆಸ್ ನವರು ದೂರು ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ದೇಶದ ಸೈನಿಕರ ಹೆಸರಿನ ಮತಯಾಚನೆ ಮಾಡುತ್ತಿದೆ.ಸಂಸದರ ಈ ಟ್ವೀಟ್ ನೀತಿ ಸಂಹಿತೆಯನ್ನು ಉಲ್ಲಂಘಟನೆ ಮಾಡಿದಂತೆ. ಈ ನಿಟ್ಟಿನಲ್ಲಿ ಸಂಸದರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಗ್ರಹಿಸಿದೆ.
ಡಿಸಿಪಿ ಅದ್ಯಕ್ಷ ಕೆ.ಹರಿಶ್ ಕುಮಾರ್, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅವರನ್ನು ಒಳಗೊಂಡ ನಿಯೋಗ ಚುನಾವಧಿಕಾರಿಗೆ ದೂರು ನೀಡಿದೆ.