ಬೆಳ್ತಂಗಡಿ: ಲೋಕೋಪಯೋಗಿ ಇಲಾಖೆ ಸಚಿವ ಎಚ್. ಡಿ. ರೇವಣ್ಣ ಮಂಗಳವಾರ ಬೆಳ್ತಂಗಡಿಗೆ ಆಗಮಿಸಿದ ಸಂದರ್ಭ ಶಾಸಕ ಹರೀಶ ಪೂಂಜ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ತಾಲೂಕಿನ ಗ್ರಾಮೀಣ ಪ್ರದೇಶದ 22 ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಮನವಿ ಸಲ್ಲಿಸಿದರು.
ತಾಲೂಕಿನ ಕೆಲವು ಗ್ರಾಮೀಣ ರಸ್ತೆಗಳು ಸರ್ವಋತು ರಸ್ತೆಯಿಂದ ವಂಚಿತವಾಗಿದ್ದು, ಬೆಳ್ತಂಗಡಿ ಲೋಕೋಪಯೋಗಿ ಉಪವಿಭಾಗ ವ್ಯಾಪ್ತಿಯಲ್ಲಿ ಕೇವಲ 100 ಕಿ. ಮೀ. ನಷ್ಟು ಜಿಲ್ಲಾ ಮುಖ್ಯ ರಸ್ತೆಗಳಿದೆ. ಅದನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಮನವಿ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಮುಖಂಡ ಕುಶಾಲಪ್ಪ ಗೌಡ ಇದ್ದರು.
ಮನವಿಯಲ್ಲಿ ಉಲ್ಲೇಖಿಸಿದ ತಾಲೂಕಿನ 22 ಗ್ರಾಮೀಣ ರಸ್ತೆಗಳು: ಪುಯ್ಯ-ಉಳಿಯ-ಕಂಚಿನಡ್ಕ-ಮುರ (5 ಕಿ.ಮೀ), ಗೋಳಿಯಂಗಡಿ-ಅಳದಂಗಡಿ-ಬೆಳ್ತಂಗಡಿ (30.20 ಕಿ.ಮೀ.), ಸುಲ್ಕೇರಿ-ಕೊಕ್ರಾಡಿ-ಶಿರ್ತಾಡಿ (14 ಕಿ.ಮೀ.), ಮುಂಡಾಜೆ-ಧರ್ಮಸ್ಥಳ (12 ಕಿ.ಮೀ), ಕೊಕ್ಕಡ-ಅರಸಿನಮಕ್ಕಿ-ಶಿಬಾಜೆ-ಉದನೆ (15 ಕಿ. ಮೀ), ಉಪ್ಪಿನಂಗಡಿ-ಅಜಿಲಮುಗೇರು-ನಾವೂರು (14 ಕಿ.ಮೀ), ಲಾಯಿಲ-ಕೊಯ್ಯೂರು-ಬೈಪಾಡಿ (14 ಕಿ.ಮೀ.), ಉಜಿರೆ-ಇಂದಬೆಟ್ಟು (12 ಕಿ.ಮೀ), ಕಾಪಿನಡ್ಕ-ಪೆರ್ಮುಡ (9 ಕಿ. ಮೀ), ಅಳದಂಗಡಿ-ಸುಲ್ಕೇರಿಮೊಗ್ರು-ಪಕ್ಕಳ-ಶಿರ್ಲಾಲು(5 ಕಿ.ಮೀ), ಪೆರಂದಡ್ಕ-ಕಾಶಿಪಟ್ನ-ಪೆರಾಡಿ-ಮರೋಡಿ-ನಾರಾವಿ(20 ಕಿ.ಮೀ), ರೆಖ್ಯಾ-ಉಪ್ಪಾರು(5 ಕಿ.ಮೀ), ಧರ್ಮಸ್ಥಳ-ಪಟ್ರಮೆ-ಗೋಳಿತೊಟ್ಟು(20 ಕಿ.ಮೀ), ವೇಣೂರು-ಮೂರ್ಜೆ (20 ಕಿ.ಮೀ), ಮಾಲಾಡಿ-ಗರ್ಡಾಡಿ(7 ಕಿ.ಮೀ), ಉಪ್ಪಿನಂಗಡಿ-ಅಂಡೆತಡ್ಕ-ಮುರ-ಮುಗೇರಡ್ಕ-ಬಂದಾರು ರಸ್ತೆ ಜಂಕ್ಷನ್( 18 ಕಿ.ಮೀ), ಉಜಿರೆ-ಇಚ್ಚಿಲ-ಸೂರ್ಯ-ನಡ-ನಾವೂರು(12 ಕಿ.ಮೀ), ಬೆಳ್ತಂಗಡಿ-ಕೆ.ಬಿ.ಇ-ರಂಕೆದಗುತ್ತು-ಮಲ್ಲೊಟ್ಟು-ಗೇರುಕಟ್ಟೆ(5 ಕಿ.ಮೀ), ಪುಂಜಾಲಕಟ್ಟೆ-ಪುರಿಯ-ಕುಕ್ಕೇಡಿ(5 ಕಿ.ಮೀ), ನಿಡ್ಲೆ-ಕಾಯರ್ತಡ್ಕ-ಹತ್ಯಡ ಸೇತುವೆ-ಶಿಶಿಲ ದೇವಸ್ಥಾನ-ಒಲ್ಲಗರಡಿ-ಶಿಬಾಜೆ(ಪೆರ್ಲ)(12 ಕಿ.ಮೀ), ನಾಳ-ಮಠ-ಬಳ್ಳಮಂಜ(ದೇವರಗುಂಡಿ)-ಮುರಾರ್ಜೆ ದೇಸಾಯಿ-ಕುತ್ತಿನ-ಕುವೆಟ್ಟು ಶಾಲೆ( 6 ಕಿ.ಮೀ), ಪರಪ್ಪು-ಬಟ್ಟೆಮಾರು-ರಕ್ತೇಶ್ವರಿಪದವು-ಮುಗೆರೋಡಿ-ಪದ್ಮುಂಜ(14 ಕಿ.ಮೀ).