ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಬೆಂಗಳೂರು ಹಾಗೂ ಹಾವೇರಿಯ ಕೆಲವೊಂದು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಲೆಕ್ಕಪತ್ರ ಸಹಾಯಕ ನಾರಾಯಣ ಗೌಡ ಪಾಟೀಲ ಅವರ ಹಾವೇರಿಯಲ್ಲಿರುವ ಬಾಡಿಗೆ ಮನೆ ಮತ್ತು ಬೆಂಗಳೂರಿನಲ್ಲಿ ಅವರು ಉಳಿದುಕೊಂಡಿದ್ದ ರಾಜಮಹಲ್ ಹೊಟೇಲ್ ಗೆ ದಾಳಿ ನಡೆಸಿದ್ದಾರೆ.
ಸುಮಾರು ಎರಡು ಕೋಟಿ ರೂ. ನಗದನ್ನು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇದು ಎಲ್ಲಿಂದ ಬಂದ ಮತ್ತು ಯಾರಿಗೆ ಕೊಡಲು ತೆಗೆದಿರಿಸಲಾಗಿದ್ದ ಹಣ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ರಾಜಕಾರಣಿಗಳ ಚಲನವಲನದ ಬಗ್ಗೆ ನಿಗಾ ಇರಿಸಿಕೊಂಡು ದಾಳಿ ರೂಪಿಸುತ್ತಿದ್ದಾರೆ.