News Karnataka Kannada
Saturday, May 11 2024
ಕರಾವಳಿ

ಶಿರೂರು ಶ್ರೀಗಳು ಸ್ತ್ರೀಲೋಲ, ಮದ್ಯಪಾನಿಯಾಗಿದ್ದರು: ಪೇಜಾವರ ಶ್ರೀ

Photo Credit :

ಶಿರೂರು ಶ್ರೀಗಳು ಸ್ತ್ರೀಲೋಲ, ಮದ್ಯಪಾನಿಯಾಗಿದ್ದರು: ಪೇಜಾವರ ಶ್ರೀ

ಉಡುಪಿ: ಶಿರೂರು ಸ್ವಾಮೀಜಿ ಅವರ ಅಂತಿಮಕ್ರಿಯೆಯಲ್ಲಿ ಭಾಗವಹಿಸದೆ ಇದ್ದ ಪೇಜಾವರ ಮಠಾಧೀಶರಾಗಿರುವ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಇಂದು ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರಿಗೆ ಸ್ತ್ರೀ ಸಂಗ ಮತ್ತು ಮದ್ಯಪಾನ ಮಾಡುತ್ತಿದ್ದರು ಎಂದು ಹೇಳಿ ವಿವಾದವನ್ನು ಉಂಟು ಮಾಡಿದ್ದಾರೆ.

ಶಿರೂರು ಶ್ರೀಗಳಿಗೆ ಯೌವನದಲ್ಲಿ ಸ್ತ್ರಿಯರ ಸಂಗವಿತ್ತು. ಮಠಾಧೀಶರಿಗೆ ಎಲ್ಲರಿಗೂ ಮಕ್ಕಳಿದ್ದಾರೆ ಎಂದು ಶಿರೂರು ಶ್ರೀಗಳು ಹೇಳಿರುವುದು ಎಲ್ಲರಿಗೂ ನೋವುಂಟು ಮಾಡಿತ್ತು. ಶಿರೂರು ಶ್ರೀಗಳಿಗೆ ಮಕ್ಕಳಿದ್ದಾರೆ ಎನ್ನುವ ವಿಚಾರವನ್ನು ವ್ಯಕ್ತಿಯೊಬ್ಬರು ಹೇಳಿದ್ದರು. ಆದರೆ ಇದು ಸತ್ಯವೆಂದು ಹೇಳಲು ಸಾಧ್ಯವಿಲ್ಲವೆಂದು ಪೇಜಾವರ ಶ್ರೀ ತಿಳಿಸಿದರು.

ಶಿರೂರು ಶ್ರೀಗಳು ವಿಪರೀತ ಮದ್ಯಪಾನ ಮಾಡುತ್ತಲಿದ್ದರು. ಇದನ್ನು ನಿಲ್ಲಿಸುವಂತೆ ನಾನೇ ಅವರಿಗೆ ಹೇಳಿದ್ದೆ. ಸ್ತ್ರೀಸಂಗ ಮಾಡಿ ಸನ್ಯಾಸ ಧರ್ಮ ಮೀರಿದ್ದರು ಎಂದರು.

ಆದರೆ ಅವರಲ್ಲಿ ಕೆಲವು ಒಳ್ಳೆಯ ಗುಣಗಳು ಕೂಡ ಇದ್ದವು. ವಿದ್ಯಾರ್ಥಿಗಳಿಗೆ ನೆರವು ನೀಡುತ್ತಲಿದ್ದರು. ಬ್ರಾಹ್ಮಣರಲ್ಲದವರ ಜತೆ ಸೇರಿ ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು