ಮಂಗಳೂರು: ಮೂವರು ಯುವಕರು ನೀರುಪಾಲಾಗಿರುವ ಘಟನೆ ಮುಲ್ಕಿಯ ಮಟ್ಟುವಿನ ಶಾಂಭವಿ ನದಿಯಲ್ಲಿ ನಡೆದಿದೆ.
ಅಕ್ಷತ್, ಕಿಶೋರ್, ಮಹೇಶ್ ನೀರುಪಾಲಾದವರು. ಮಂಗಳೂರಿನಿಂದ ಶಾಂಭವಿ ನದಿಗೆ ತೆರಳಿದ್ದ ಏಳು ಯುವಕರು ಒಟ್ಟಿಗೆ ನದಿಗಿಳಿದಿದ್ದಾರೆ. ಈ ಸಂದರ್ಭದಲ್ಲಿ ಮೂವರು ಯುವಕರು ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಸದ್ಯ ಮುಳುಗು ತಜ್ಞರಿಂದ ನಾಪತ್ತೆಯಾದವರ ಶೋಧ ಕಾರ್ಯ ನಡೆಯುತ್ತಿದ್ದು, ಮುಲ್ಕಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.