ಪುತ್ತೂರು: ಕೊಂಬೆಟ್ಟು ಪದ್ಯಾಣ ರಸ್ತೆಯಲ್ಲಿರುವ ಮನೆಯೊಂದಕ್ಕೆ ಕಳ್ಳರು ನುಗ್ಗಿದ ಘಟನೆ ಅ.23ಕ್ಕೆ ಬೆಳಕಿಗೆ ಬಂದಿದೆ.
ಪದ್ಯಾಣ ರಸ್ತೆಯ ನಿವಾಸಿಯಾಗಿದ್ದ ದಿ.ಈಶ್ವರ ಭಟ್ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಮನೆಯಲ್ಲಿ ದಿ.ಈಶ್ವರ ಭಟ್ ಅವರ ಪತ್ನಿ ಸರಸ್ವತಿ ಎಂಬವರು ಇದ್ದು, ಅವರು ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಮನೆಯಲ್ಲಿ ಕಳ್ಳತನ ನಡೆದಿದೆ. ಕಳ್ಳರು ಮನೆಯ ಹಿಂದಿನ ಬಾಗಿಲು ಒಡೆದು ಒಳಪ್ರವೇಶಿಸಿ ಕಪಾಟಿನ ಬೀಗ ಮುರಿದು ಒಳಗೆ ಜಾಲಾಡಿದ್ದಾರೆ.
ಘಟನಾ ಸ್ಥಳಕ್ಕೆ ಪುತ್ತೂರು ನಗರ ಪೊಲೀಸ್ ಠಾಣೆಯ ಕ್ರೈಮ್ ಎಸ್.ಐ ರುಕ್ಮಯ ಮತ್ತು ಸಿಬಂದಿಗಳು ತೆರಳಿ ತನಿಖೆ ನಡೆಸುತ್ತಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು, ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮನೆಗೆ ಭೇಟಿ ನೀಡಿದ್ದಾರೆ.