ಪುತ್ತೂರು: ಪರೀಕ್ಷೆಯ ಭಯದಿಂದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಒಳಮೊಗ್ರು ಗ್ರಾಮದ ಕೇರಿ ಮನೆ ಎಂಬಲ್ಲಿ ನಡೆದ ಬಗ್ಗೆ ಅ.21ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಒಳಮೊಗ್ರು ಗ್ರಾಮದ ಕೇರಿಮನೆ ನಿವಾಸಿ ವಿಠಲ ರೈ ಎಂಬವರ ಪುತ್ರಿ ಪುತ್ತೂರು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿರುವ ವೀಣಾ(17) ಮ್ರತಪಟ್ಟವರು.
ಕಲಿಕೆಯ ದೃಷ್ಟಿಯಿಂದ ಇತ್ತೀಚೆಗೆ ವಿದ್ಯಾರ್ಥಿನಿ ವೀಣಾ ಅವರ ಹೆತ್ತವರನ್ನು ಕಾಲೇಜಿಗೆ ಕರೆಸಿ ಪರೀಕ್ಷೆಗಾಗಿ ಹೆಚ್ಚಿನ ಸಿದ್ಧತೆ ನಡೆಸಲು ತಿಳಿಸುವಂತೆ ಮನವರಿಗೆ ಮಾಡಿದ್ದರು. ಈ ಕುರಿತು ಹೆತ್ತವರು ಕೂಡಾ ಕಲಿಕೆಯಲ್ಲಿ ಹೆಚ್ಚಿನ ಗಮನ ಹರಿಸುವಂತೆ ಬುದ್ದಿವಾದ ಹೇಳುತ್ತಿದ್ದರು. ಕಳೆದ ವಾರದಿಂದ ಪರೀಕ್ಷೆಯೂ ಆರಂಭಗೊಂಡಿತ್ತು. ವೀಣಾ ಅವರು ಕೂಡಾ ಪರೀಕ್ಷಾ ತಯಾರಿ ನಡೆಸಿದ್ದರು. ಆದರೆ ಅ.21ರಂದು ಬೆಳಗ್ಗೆ ಗಂಟೆ 4ಕ್ಕೆ ಎದ್ದು ಪರೀಕ್ಷಾ ಸಿದ್ಧತೆ ನಡೆಸುತ್ತಿದ್ದ ವೀಣಾ ಅವರು ಸ್ವಲ್ಪ ಹೊತ್ತಿನ ಬಳಿಕ ಅಲ್ಲಿ ಎಲ್ಲಿಯೂ ಕಾಣದಿದ್ದಾಗ ಮನೆ ಮಂದಿ ಹುಡುಕಾಡಿದರು. ವೀಣಾ ಅವರ ಮೃತದೇಹ ಮನೆಯ ಸಮೀಪದ ತೋಟದಲ್ಲಿರುವ ಕೆರೆಯಲ್ಲಿ ಇರುವುದು ಬೆಳಕಿಗೆ ಬಂದಿತ್ತು.
ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.