ಮಂಗಳೂರು: ಯುವ ಉದ್ಯಮಿ ಆತ್ಮಹತ್ಯೆ ನಡೆಸಿರುವ ಘಟನೆ ನೇತ್ರಾವತಿ ಸೇತುವೆಯಲ್ಲಿ ಶುಕ್ರವಾರ ಮುಂಜಾನೆ ವೇಳೆ ನಡೆದಿದ್ದು, ಒಂದು ಗಂಟೆ ಕಾರ್ಯಾಚರಣೆ ಬಳಿಕ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಕುತ್ತಾರು ನಿವಾಸಿ ಮಹಾಬಲ ಕೊಟ್ಟಾರಿ ಎಂಬವರ ಪುತ್ರ ನವೀಶ್ ಕೊಟ್ಟಾರಿ(28) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.
ಪ್ರಸ್ತುತ ಉಳ್ಳಾಲಬೈಲಿನಲ್ಲಿ ವಾಸವಿದ್ದ ಇವರು ಶುಕ್ರವಾರ ಬೆಳಗ್ಗಿನ ಜಾವ ಮನೆಯಿಂದ ಬೈಕಿನಲ್ಲಿ ಹೊರಟವರು, ನೇತ್ರಾವತಿ ಸೇತುವೆಯಿಂದ ಜಿಗಿದು ಆತ್ಮಹತ್ಯೆ ನಡೆಸಿದ್ದಾರೆ.
ಕುತ್ತಾರು ಬಳಿ ಶಾಮಿಯಾನ ಅಂಗಡಿ, ನೀರಿನ ಟ್ಯಾಂಕರ್ ವ್ಯವಹಾರ ನಡೆಸುತ್ತಿದ್ದರು. ಗುರುವಾರ ರಾತ್ರಿಯಿಂದಲೇ ಮಂಕಾಗಿದ್ದರು, ಆರ್ಥಿ ಕ ಸಂಕಷ್ಟದಿಂದ ಆತ್ಮಹತ್ಯೆ ನಡೆಸಿರುವ ಶಂಕೆ ಇದೆ. ನವೀಶ್ ಅವಿವಾಹಿತರಾಗಿದ್ದು, ತಾಯಿ, ತಂದೆ , ಇಬ್ಬರು ಸಹೋದರರನ್ನು ಅಗಲಿದ್ದಾರೆ.