News Karnataka Kannada
Thursday, May 02 2024
ಕರಾವಳಿ

ನಾಳೆ ಉಡುಪಿಗೆ ಆಗಮಿಸಲಿರುವ ರಾಷ್ಟ್ರಪತಿ: ಬಿಗಿ ಪೊಲೀಸ್ ಬಂದೋಬಸ್ತ್

Photo Credit :

ನಾಳೆ ಉಡುಪಿಗೆ ಆಗಮಿಸಲಿರುವ ರಾಷ್ಟ್ರಪತಿ: ಬಿಗಿ ಪೊಲೀಸ್ ಬಂದೋಬಸ್ತ್

ಉಡುಪಿ: ನಾಳೆ ರಾಷ್ಟಪತಿ ರಾಮನಾಥ್ ಕೋವಿಂದ್ ಉಡುಪಿಗೆ ಆಗಮನ‌ ಹಿನ್ನೆಲೆ ಉಡುಪಿ ನಗರದಾದ್ಯಂತ ಬಿಗಿ‌ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಇವತ್ತು ಝೀರೋ ಟ್ರಾಫಿಕ್ ಮಾಡಿ ರಿಹರ್ಸಲ್ ನಡೆಸಿ ಪೊಲೀಸ್ ಇಲಾಖೆ ಕಾರ್ಯಾರಂಭಗೊಂಡಿದೆ. ನಾಳೆ ಆದಿ ಉಡುಪಿ ಹೆಲಿಪ್ಯಾಡ್ ಗೆ ಆಗಮಿಸಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಕೃಷ್ಣಮಠಕ್ಕೆ ಆಗಮಿಸಲಿರುವ ರಾಷ್ಟಪತಿ ಬಳಿಕ ಪೇಜಾವರ ಶ್ರೀಗಳನ್ನು ಭೇಟಿಯಾಗಲಿದ್ದಾರೆ.

ಪೇಜಾವರ ಶ್ರೀಗಳ ಸನ್ಯಾಸ ಸ್ವೀಕಾರಕ್ಕೆ ಎಂಬತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾಗಲಿರುವ ರಾಷ್ಟ್ರಪತಿ, ಶ್ರೀಗಳ ಜೊತೆ ಕೃಷ್ಣ ದರ್ಶನವನ್ನೂ ಪಡೆಯಲಿದ್ದಾರೆ. ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ವಾರದಿಂದಲೇ ಸಿದ್ದತಾ ಕಾರ್ಯ ಚುರುಕುಗೊಂಡಿದ್ದು, ನಗರದ ಅನೇಕ ಕಡೆಗಳಲ್ಲಿ ನಾಳೆ ಸಂಚಾರ ವ್ಯವಸ್ಥೆಯಲ್ಲಿ‌ ಬದಲಾವಣೆಯಾಗಲಿದೆ. ಹನ್ನೆರಡು ಗಂಟೆಗೆ ಆಗಮಿಸಿ ನಲವತ್ತು ನಿಮಿಷ ಉಡುಪಿಯ ಕಾರ್ಯಕ್ರಮದಲ್ಲಿ‌ ರಾಷ್ಟ್ರಪತಿ ಭಾಗವಹಿಸಲಿದ್ದಾರೆ. ಈ ಸಂದರ್ಭ ರಾಜ್ಯಪಾಲರ ಸಹಿತ ಅನೇಕ‌ ಗಣ್ಯರೂ‌ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
192
Shreyas Vittal

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು