ಸುಳ್ಯ: ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆಯ ಅಂಗವಾಗಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭವ್ಯ ಸಂಕಲ್ಪ ದಿನಾಚರಣೆ ನಡೆಯಿತು.
ನಗರ ಪಂಚಾಯಿತಿ ಸದಸ್ಯ ಕೆ.ಗೋಕುಲ್ದಾಸ್ ಉದ್ಘಾಟಿಸಿದರು. ಸಮಾಜ ಸೇವಕ ತಿಮ್ಮಪ್ಪ ಗೌಡ ನಾವೂರು ಅವರನ್ನು ಸನ್ಮಾನಿಸಲಾಯಿತು. ಹಿರಿಯ ಉದ್ಯಮಿ ಅಬ್ಬಾಸ್ ಹಾಜಿ ಕಟ್ಟೆಕಾರ್ಸ್ ಸನ್ಮಾನ ನೆರವೇರಿಸಿದರು.
ನಗರ ಪಂಚಾಯಿತಿ ಸದಸ್ಯರಾದ ಪ್ರಕಾಶ್ ಹೆಗ್ಡೆ, ಕೆ.ಎಂ.ಮುಸ್ತಫಾ, ಶರೀಫ್ ಕಂಠಿ, ಸಿದ್ದಿಕ್, ಸಂತೋಷ್ ಕುಂಭಕ್ಕೋಡು, ಕೇಶವ ಆಚಾರ್ಯ, ಪ್ರವೀಣ್ ನಾಯಕ್, ರಿಯಾಜ್ ಕಟ್ಟೆಕಾರ್ಸ್, ಸೋಮನಾಥ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತೇಜೇಶ್ವರ ಕುಂದಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿದರು.
ಹರೀಶ್ ಬಂಟ್ವಾಳ್ ಪ್ರಮಾಣ ವಚನ ಬೋಧಿಸಿದರು. ದುರ್ಗಾಕುಮಾರ್ ನಾಯರ್ಕೆರೆ ಸನ್ಮಾನ ಪತ್ರ ವಾಚಿಸಿದರು. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಹಸೈನಾರ್ ಜಯನಗರ ವಂದಿಸಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.