ಉಡುಪಿ: ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪತ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿ ಬಲವಂತವಾಗಿ ಟೋಲ್ ಸಂಗ್ರಹ ಮಾಡುವ ನವಯುಗ ಕಂಪೆನಿ ವಿರುದ್ದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತರು ಸಾಸ್ತಾನ ಟೋಲ್ ಗೇಟ್ ಬಳಿಯಿಂದ ಪಾದಯಾತ್ರೆಯ ಮೂಲಕ ತೆರಳಿ ಕೋಟ ಪೊಲೀಸ್ ಠಾಣೆಗೆ ತೆರಳಿ,ಹೆದ್ದಾರಿಯಲ್ಲಿ ಬಲವಂತವಾಗಿ ಟೋಲ್ ವಸೂಲಿ ಮಾಡುವ ಗೂಂಡಾಗಳಿಂದ ರಕ್ಷಣೆ ನೀಡವಂತೆ ಮನವಿ ಸಲ್ಲಿಸಿದರು.
ರಾಷ್ಡ್ರೀಯ ಹೆದ್ದಾರಿಯನ್ನ ವೈಜ್ಞಾನಿಕವಾಗಿ ಮಾಡಬೇಕು, ಅಗತ್ಯವಿರುವೆಡೆ ಸರ್ವಿಸ್ ರಸ್ತೆ, ಫ್ಲೈಓವರ್, ಪಾದಚಾರಿ ಮೇಲ್ಸೇತುವೆ, ಅಂಡರ್ ಪಾಸ್, ಆಂಬುಲೆನ್ಸ್ ಗೆ ಪ್ರತ್ಯೇಕ ರಸ್ತೆ ಮಾಡಬೇಕು. ಇದ್ಯಾವುದನ್ನ ಮಾಡದೆ ನವಯುಗ ಸಂಸ್ಥೆ ಟೋಲ್ ಸಂಗ್ರಹಿಸುತ್ತಿದೆ. ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು. ಕೇಂದ್ರ ಸರ್ಕಾರ ಕೂಡಲೇ ನವಯುಗ ಕಂಪೆನಿಯ ಕಿವಿ ಹಿಂಡಬೇಕು ಎಂದು ಆಗ್ರಹಿಸಿದರು.