ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆಯಿಂದ ಕಾಲೇಜು ಪರಿಸರದ ಪಿ.ಜಿ.ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಅನಧಿಕೃತ ಪಿ.ಜಿಗಳು ಬೆಳಕಿಗೆ ಬಂದಿದೆ.
ನಗರಸಭೆಗೆ ಸಂಬಂಧಿಸಿ ಸುಮಾರು 18ರಷ್ಟು ಪಿ.ಜಿಗಳು ಪರವಾನಿಗೆ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ನೆಹರೂ ನಗರಕ್ಕೆ ತೆರಳಿ ಅಲ್ಲಿನ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಅನೇಕ ಅನಧಿಕೃತ ಪಿ.ಜಿಗಳು ಬೆಳಕಿಗೆ ಬಂದಿದೆ. ಕೆಲವೊಂದು ಪಿ.ಜಿಗಳು ಪಡೆದು ಕೊಂಡ ಪರವಾನಿಯನ್ನು ನವೀಕರಣ ಮಾಡದಿರುವುದು ಮತ್ತು ವಿದ್ಯಾರ್ಥಿಗಳು ಪಿ.ಜಿ ಯಿಂದ ಹೊರಗೆ ಹೋಗುವ ಮತ್ತು ಹಿಂದಕ್ಕೆ ಬರುವ ಸಮಯದ ಪುಸ್ತಕ ನಿರ್ವಹಣೆ ಮಾಡದಿರುವುದನ್ನು ಗಮನಿಸಿದ ಪೌರಾಯುಕ್ತೆ ರೂಪಾ ಶೆಟ್ಟಿ ಪಿ.ಜಿ. ಮಾಲಕರುಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಇಂಜಿನಿಯರ್ ಗಳು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.