News Karnataka Kannada
Sunday, April 28 2024
ಕರಾವಳಿ

ದಾರಿ ದೀಪಗಳಿಗೆ ಹಾನಿ: ಯುವಕರ ಬಂಧನ

Photo Credit :

ದಾರಿ ದೀಪಗಳಿಗೆ ಹಾನಿ: ಯುವಕರ ಬಂಧನ

ಪುತ್ತೂರು: ಬಪ್ಪಳಿಗೆಯಲ್ಲಿ ನಗರಸಭೆಯ ದಾರಿ ದೀಪಗಳಿಗೆ ಹಾನಿಯುಂಟು ಮಾಡುತ್ತಿದ್ದ ಯುವಕರನ್ನು ಸಿ.ಸಿ.ಕ್ಯಾಮರಾದ ಫೂಟೇಜ್ ಆಧರಿಸಿ ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಬಪ್ಪಳಿಗೆಯಲ್ಲಿ ದಾರಿ ದೀಪಗಳು ಹಾನಿಗೀಡಾಗಿರುವ ವಿಚಾರ ಜ.21ರಂದು ಬೆಳಿಕಿಗೆ ಬಂದ ತಕ್ಷಣ ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪುತ್ತೂರು ಪೊಲೀಸರು ಬಪ್ಪಳಿಗೆ ಮಸೀದಿ ಬಳಿಯ ಸಿ.ಸಿ.ಕ್ಯಾಮರಾವನ್ನು ಪರಿಶೀಲಿಸಿದಾಗ ಜ.20ರಂದು ರಾತ್ರಿ ಯುವಕರಿಬ್ಬರು ದಾರಿ ದೀಪಗಳಿಗೆ ಕಲ್ಲು ಬೀಸಾಕಿ ಹಾನಿ ಮಾಡುತ್ತಿರುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಪತ್ತೆಯಾಗಿದ್ದು ಅದರ ಆಧಾರದಲ್ಲಿ ದಾರಿ ದೀಪಗಳಿಗೆ ಹಾನಿ ಮಾಡಿದ ಯುವಕರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಾನಿಗೀಡಾದ ಸೊತ್ತಿನ ಮೌಲ್ಯ ವಸೂಲಿ:
ಯುವಕರಿಬ್ಬರು ಸುಮಾರು 12 ಟ್ಯೂಬ್‍ಲೈಟ್ ಮತ್ತು 2 ಸಿಎಫ್‍ಎಲ್ ಬಲ್ಪ್‍ಗಳನ್ನು ಹಾನಿ ಮಾಡಿದ್ದರು. ಅದರ ಒಟ್ಟು ಮೊತ್ತ ರೂ. 17ಸಾವಿರವನ್ನು ಅವರ ಪೋಷಕರು ನಗರಸಭೆಗೆ ಪಾವತಿಸಿದ್ದಾರೆಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
185

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು