News Karnataka Kannada
Friday, May 10 2024
ಕರಾವಳಿ

ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಕಾರು ಡಿಕ್ಕಿ: ಚಾಲಕ ಸಾವು

Photo Credit :

ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಕಾರು ಡಿಕ್ಕಿ: ಚಾಲಕ ಸಾವು

ಕಾಸರಗೋಡು: ರಸ್ತೆ ಬದಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಚಾಲಕರೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಪೊಯಿನಾಚಿ ಪೆಟ್ರೋಲ್ ಬಂಕ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.

Car driver dies after being hit by speeding car-1ಮೃತಪಟ್ಟವರನ್ನು ಕುಂಡಕುಯಿ ಮರುಂತಡ್ಕದ ಮಧುಸೂದನ್  (32) ಎಂದು ಗುರುತಿಸಲಾಗಿದೆ. ಕೊಲ್ಲೂರಿಗೆ ತೆರಳಿ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಕುಂಡಂಕುಯಿಯಿಂದ ನಾಲ್ವರು ಜುಲೈ 12 ರಂದು ಕೊಲ್ಲೂರು ದೇವಸ್ಥಾನಕ್ಕೆ ತೆರಳಿದ್ದರು. ಕೊಲ್ಲೂರಿನಿಂದ ಕಾಸರಗೋಡಿಗೆ ಮರಳುವ ದಾರಿ ಮಧ್ಯೆ ಬೆಳಿಗ್ಗೆ ಪೊಯಿನಾಚಿಗೆ ತಲುಪಿದಾಗ ಪೆಟ್ರೋಲ್ ಪಂಪ್ ನಲ್ಲಿ ಅಲ್ಪ ಸಮಯ ಚಾಲಕ ಕಾರು ನಿಲ್ಲಿಸಿದ್ದು, ಉಳಿದವರು ಕಾರಿನಲ್ಲೇ ಕುಳಿತಿದ್ದರು. ಈ ನಡುವೆ ಚಾಲಕ ಮಧುಸೂದನ್ ಕೆಳಗಿಳಿದು ಮೊಬೈಲ್ ನಲ್ಲಿ ಮಾತನಾಡುತ್ತ ಮುಂದೆ ಬರುತ್ತಿದ್ದಂತೆ ರಾಷ್ಟ್ರೀಯ  ಹೆದ್ದಾರಿ ಮೂಲಕ  ಅತೀ ವೇಗದಿಂದ  ಬಂದ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆ.  ಡಿಕ್ಕಿಯ  ರಭಸಕ್ಕೆ ಅಲ್ಪ ದೂರ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಮಧುಸೂದನ್ ರನ್ನು  ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು