News Karnataka Kannada
Thursday, May 09 2024
ಕರಾವಳಿ

ಚಿನ್ನಾಭರಣ ಕಳವು ಪ್ರಕರಣ:ಆರೋಪಿ ಬಂಧನ

Photo Credit :

ಚಿನ್ನಾಭರಣ ಕಳವು ಪ್ರಕರಣ:ಆರೋಪಿ ಬಂಧನ

ಕಾಸರಗೋಡು: ವಿವಾಹ ಸಿದ್ಧತೆಯಲ್ಲಿದ್ದ ಮನೆಯಿಂದ 13 ಪವನ್ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಬದಿಯಡ್ಕ ಠಾಣಾ  ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ನೆಕ್ರಾಜೆಯ ಎಂ .ಪಿ  ಹರೀಶ್ ಕುಮಾರ್  (36) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ  ಮುಳ್ಳೇರಿಯದ  ಅಶೋಕ್  ಎಂಬಾತನನ್ನು ಕೆಲ ದಿನಗಳ ಹಿಂದೆ ಬಂಧಿಸಲಾಗಿತ್ತು. ಕಳೆದ  ಜನವರಿ  31 ರಂದು  ಕಳವು ನಡೆದಿತ್ತು.  ಬಾರಡ್ಕದ  ಶರತ್  ಎಂಬವರ ಮನೆಗೆ ನುಗ್ಗಿ 12 ಪವನ್ ಚಿನ್ನಾಭರಣ ಕಳವು ಮಾಡಲಾಗಿತ್ತು. ಮಾರ್ಚ್ ನಲ್ಲಿ  ಮಗಳ ವಿಹಾಹಕ್ಕೆ ಚಿನ್ನಾಭರಣವನ್ನು  ಖರೀದಿಸಿ ಇಡಲಾಗಿತ್ತು.

ಮನೆಯವರು ಸಂಜೆ 7 ಗಂಟೆಗೆ  ಮನೆಗೆ ಬೀಗ ಹಾಕಿ  ಬದಿಯಡ್ಕ ಪೇಟೆಗೆ ತೆರಳಿದ್ದರು.   ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿತ್ತು. ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಈ ಕೃತ್ಯ ನಡೆಸಲಾಗಿತ್ತು.  ಈ ಬಗ್ಗೆ ಲಭಿಸಿದ ದೂರಿನಂತೆ  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು