News Karnataka Kannada
Friday, May 03 2024
ಕರಾವಳಿ

ಇಂದು ಮಹಾಲಯ ಅಮಾವಾಸ್ಯೆ; ಕಡಲ ತೀರದಲ್ಲಿ ಮಿಂದೆದ್ದ ಸಾವಿರಾರು ಜನರು

Photo Credit :

ಇಂದು ಮಹಾಲಯ ಅಮಾವಾಸ್ಯೆ; ಕಡಲ ತೀರದಲ್ಲಿ ಮಿಂದೆದ್ದ ಸಾವಿರಾರು ಜನರು

ಉಡುಪಿ: ಇಂದು ಮಹಾಲಯ ಅಮವಾಸ್ಯೆ, ಇದು ಪಿತೃಗಳನ್ನು ನೆನೆಯುವ ದಿನ, ಕಡಲ ತೀರಕ್ಕೆ ತೆರಳಿ ಸಮುದ್ರ ಸ್ನಾನ ಕೈಗೊಂಡು, ತರ್ಪಣೆ ಬಿಟ್ಟರೆ ನಮ್ಮನ್ನಗಲಿದ ಆತ್ಮಗಳಿಗೆ ಮೋಕ್ಷ ದೊರೆಯುತ್ತೆ ಅನ್ನೋದು ನಂಬಿಕೆ, ಹಾಗಾಗಿ ಕರಾವಳಿಯ ಕಡಲ ತೀರದಲ್ಲಿ ಸಾವಿರಾರು ಜನರು ಈ ಪುಣ್ಯಕಾರ್ಯ ಕೈಗೊಂಡರು.

ದೇವರಿಗೆ ತೀರಿಸುವ ಹರಕೆಗಳಲ್ಲಿ ವಿಳಂಬವಾದರೂ ತೊಂದರೆಯಿಲ್ಲ, ಪಿತೃಗಳಿಗೆ ನಿಗದಿಯಾದ ದಿನವೇ ತರ್ಪಣ ನೀಡಬೇಕು ಅನ್ನೋದು ಜನರ ನಂಬಿಕೆ. ಹಾಗಾಗಿ ಮಹಾಲಯ ಅಮವಾಸ್ಯೆಯ ದಿನ ಬಹುತೇಕ ಜನರು ಶೃದ್ಧೆಯಿಂದ ಈ ಕಾರ್ಯ ಕೈಗೊಳ್ತಾರೆ. ಮುಂಜಾನೆಯಿಂದಲೇ ಮಲ್ಪೆ ಕಡಲ ತೀರದಲ್ಲಿ ಸಾವಿರಾರು ಜನರು ಪಿತೃಕಾರ್ಯ ಕೈಗೊಂಡರು. ಮೊದಲು ಸಮುದ್ರದಲ್ಲಿ ಮಿಂದು ಬಳಿಕ ತಿಲಾ ಹೋಮ ನಡೆಸಿ, ತರ್ಪಣ ಬಿಟ್ಟರು.

ಅಮವಾಸ್ಯೆಯ ದಿನ ಕೈಗೊಳ್ಳುವ ಸಮುದ್ರ ಸ್ನಾನಕ್ಕೂ ವಿಶೇಷ ಮಹತ್ವ ಇದೆ. ಈ ಬಾರಿ ಮಳೆ ಕಡಿಮೆ ಇದ್ದುದರಿಂದ ಪೂಜೆಯಲ್ಲಿ ಭಾಗವಹಿಸಿದವರ ಸಂಖ್ಯೆಯೂ ಹೆಚ್ಚಾಗಿತ್ತು. ಪಿತೃ ತರ್ಪಣದಿಂದ ಕುಟುಂಬಕ್ಕೆ ಏಳಿಗೆ ಆಗುತ್ತೆ, ಮಕ್ಕಳ ಭವಿಷ್ಯ ಉಜ್ವಲವಾಗುತ್ತೆ ಅನ್ನೋದು ಈ ಭಾಗದ ಜನರ ನಂಬಿಕೆ, ಇಂದು ಪಿತೃ ತರ್ಪಣ ಬಿಟ್ಟರೆ ಹಿರಿಯರ ಆತ್ಮಗಳಿಗೆ ಮೋಕ್ಷ ದೊರಕುತ್ತಂತೆ, ಮಲ್ಪೆ ಮಾತ್ರವಲ್ಲದೆ ಕರಾವಳಿ ತೀರದುದ್ದಕ್ಕೂ ವೈದಿಕರ ಮೂಲಕ ಈ ಧಾರ್ಮಿಕ ಕಾರ್ಯ ಸಂಪನ್ನಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
192
Shreyas Vittal

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು