ಪುತ್ತೂರು: ಗೋವಕ್ಕೆಂದು ಹೋದ ಇರ್ದೆಯಲ್ಲಿ ವಾಸ್ತವ್ಯ ಹೊಂದಿದ್ದ ವ್ಯಕ್ತಿಯೋರ್ವರು ನಾಪ್ತೆಯಾಗಿದ್ದಾರೆಂದು ಆಕೆಯ ಪತ್ನಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೂಲತಃ ಮಹಾರಾಷ್ಟ್ರದ ಕುಡಾಲ್ ಸಿಂಧು ದುರ್ಗಾ ನಿವಾಸಿಯಾಗಿದ್ದು ಇರ್ದೆ ಗ್ರಾಮದ ಉಪ್ಪಳಿಗೆಯಲ್ಲಿ ವಾಸ್ತವ್ಯ ಹೊಂದಿರುವ ದತ್ತಪ್ರಸಾದ್ ಫರಬ್(40ವ)ರವರು ನಾಪತ್ತೆಯಾದವರು.
ಅವರು ಮೇ 30ರಂದು ಬೆಳಿಗ್ಗೆ ಗಂಟೆ 4ಕ್ಕೆ ಗೋವಾಕ್ಕೆಂದು ಹೋದವರು ಈ ತನಕ ಮನೆಗೆ ವಾಪಾಸು ಬಂದಿಲ್ಲ. ಅವರ ನಾಪತ್ತೆಯಿಂದ ಸಂಬಂಧಿಕರ ಮನೆಗಳಲ್ಲಿ ನೆರೆಹೊರೆಯವರಲ್ಲಿ ವಿಚಾರಿಸಿದ ಬಳಿಕ ಇದೀಗ ಆಕೆಯ ಪತ್ನಿ ಮನೀಷಾರವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.