News Karnataka Kannada
Monday, May 06 2024
ಕಲಬುರಗಿ

ಸನಾತನ ಧರ್ಮದ ಹೆಸರಲ್ಲಿ ಜಾಧವ್ ಮತಯಾಚನೆ; ಎಫ್.ಐ.ಆರ್.ದಾಖಲು

ಮಾದರಿ ನೀತಿ ಸಂಹಿತೆ, ಪ್ರಚಾರ ಸಭೆಯ ನಿಯಮ ಉಲ್ಲಂಘಿಸಿ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಸನಾತನ ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡಿದ ಆರೋಪದಡಿ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Photo Credit : NewsKarnataka

ಕಲಬುರಗಿ: ಮಾದರಿ ನೀತಿ ಸಂಹಿತೆ, ಪ್ರಚಾರ ಸಭೆಯ ನಿಯಮ ಉಲ್ಲಂಘಿಸಿ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಸನಾತನ ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡಿದ ಆರೋಪದಡಿ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತಕ್ಷೇತ್ರದ ಹಲಕಟ್ಟಾ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಏ.18ರಂದು ನಡೆದ ಪ್ರಚಾರ ಸಭೆಯಲ್ಲಿ ‘ಸನಾತನ ಧರ್ಮ ಕ್ಯಾನ್ಸರ್, ಏಡ್ಸ್, ಡೆಂಗಿ ಇದ್ದ ಹಾಗೆ. ಸನಾತನ ಧರ್ಮವನ್ನು ಬೀಜ ಸಮೇತ ಕಿತ್ತು ಹಾಕಬೇಕು’ ಎಂದು ಈ ಕ್ಷೇತ್ರದ ಮಂತ್ರಿ ಹೇಳಿಕೆ ನೀಡಿರುವುದಾಗಿ ಉಮೇಶ ಜಾಧವ ಹೇಳಿದ್ದಾರೆ’ ಎಂದು ಚುನಾವಣಾ ಎಫ್‌ಎಸ್‌ಟಿ ತಂಡದ ಅಧಿಕಾರಿ ಡಾ.ಶಂಕರ ಕಣ್ಣಿ ದೂರು ನೀಡಿದ್ದರು.

‘ಸನಾತನ ಧರ್ಮದ ಉಳಿವಿಗೆ, ನಮ್ಮ ಭವಿಷ್ಯಕ್ಕಾಗಿ, ದೇಶದ ಏಕತೆಗಾಗಿ, ನಮ್ಮ ಮುಂದಿನ ಪೀಳಿಗೆ, ಸುರಕ್ಷತೆ, ಮೋದಿಗಾಗಿ ಈ ಸಲ ಕಮಲದ ಹೂವಿಗೆ ಮತ ಹಾಕಿ ಗೆಲ್ಲಿಸಬೇಕು’ ಎಂದು ಜಾಧವ ಭಾಷಣದಲ್ಲಿ ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ವಾಡಿ ಪೊಲೀಸ್ ಠಾಣೆಯಲ್ಲಿ ಕಲಂ 125, 123(3), ಆರ್‌ಪಿ ಕಾಯ್ದೆ ಕಲಂ 505(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು