ಕಲಬುರಗಿ: ಶಹಾಪುರದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಜೇವರ್ಗಿಯ ಆಂದೋಲ ಸಿದ್ದಲಿಂಗ ಸ್ವಾಮೀಜಿ ಪ್ರಚೋದನಕಾರಿ ಭಾಷಣ ಆರೋಪದಡಿ ಇಲ್ಲಿನ ನಗರ ಠಾಣೆ ಪಿಐ ಅವರು ಎಸ್.ಎಂ.ಪಾಟೀಲ್ ಅವರ ಸ್ವಪ್ರೇಣೆಯಿಂದ ಶುಕ್ರವಾರ ಪ್ರಕರಣ ದಾಖಲು ಮಾಡಿದ್ದಾರೆ.
ಸಮುದಾಯಗಳ ಮೇಲೆ ವೈಷಮ್ಯ ಬೆಳೆಸುವ ಉದ್ದೇಶದಿಂದ ಸಾರ್ವಜನಿಕವಾಗಿ ಪ್ರಚೋದನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ದೂರು ದಾಖಲು ಮಾಡಲಾಗಿದೆ.
ಅ.3 ರಂದು ಸಂಜೆ “ಜೇವರ್ಗಿ ಆಂದೋಲ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಶಹಾಪುರ ಪಟ್ಟಣದಲ್ಲಿ ಶೋಭಾಯಾತ್ರೆ ಯಶಸ್ವಿಯಾಗಿದೆ. ಹಿಂದೂಗಳ ಶೋಭಾಯಾತ್ರೆ ಅಂದರೆ ಅದು ಶಾಂತ ರೀತಿಯಲ್ಲಿ ಕೂಡಿದ ಶೋಭಾ ಯಾತ್ರೆ. ಮುಸ್ಲಿಂರ ರೀತಿಯಲ್ಲಿ ಕಲ್ಲು ಹೊಡೆಯುವ ಶೋಭಾಯಾತ್ರೆ ಅಲ್ಲ. ನಮ್ಮದು ಏನಿದ್ದರೂ ಒಂದೇ ಮಾರೋ ದೋ ತುಕಡಾ ಹಿಂದೂಗಳ ಮೇಲೆ ಹಲ್ಲೆ ನಡೆದರೆ ಕರ್ನಾಟಕ ಎರಡನೇ ಗೋಧ್ರಾ ಆಗುತಿತ್ತು ‘ ಅಂತ ಮಾತಾಡಿದ್ದುಇದೇ’ ಎಂದು ಪಿ.ಐ ಎಸ್.ಎಂ.ಪಾಟೀಲ ದೂರಿನಲ್ಲಿ ತಿಳಿಸಿದ್ದಾರೆ.
ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುವ ಕಾಲಕ್ಕೆ ತೆರೆದ ವಾಹನದಲ್ಲಿ ಕರಣ ಸುಬೇದಾರ, ಕಾಂತು ಪಾಟೀಲ, ಅಡಿವೆಪ್ಪ ಜಾಕಾ, ಶಿವರಾಜ ದೇಶಮುಖಹಾಗೂ ಎಟ್ ಇಬ್ಬರು. ಬಂದೋಬಸ್ತ್ಗೆ ನೇಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.
ಶಹಾಪುರ ಠಾಣೆಯ ಪಿಎಸ್ ಐ ಶ್ಯಾಮ ಸುಂದರ ನಾಯಕ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.