News Karnataka Kannada
Saturday, May 04 2024
ಕಲಬುರಗಿ

ಪ್ರಚೋದನಕಾರಿ ಭಾಷಣ: ಆಂದೋಲಾ ಶ್ರೀಗಳ ವಿರುದ್ಧ ಪ್ರಕರಣ ದಾಖಲು

Case registered against Andolan seer for making inflammatory speeches
Photo Credit : News Kannada

ಕಲಬುರಗಿ: ಶಹಾಪುರದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಜೇವರ್ಗಿಯ ಆಂದೋಲ ಸಿದ್ದಲಿಂಗ ಸ್ವಾಮೀಜಿ ಪ್ರಚೋದನಕಾರಿ ಭಾಷಣ ಆರೋಪದಡಿ ಇಲ್ಲಿನ ನಗರ ಠಾಣೆ ಪಿಐ ಅವರು ಎಸ್.ಎಂ.ಪಾಟೀಲ್ ಅವರ ಸ್ವಪ್ರೇಣೆಯಿಂದ ಶುಕ್ರವಾರ ಪ್ರಕರಣ ದಾಖಲು ಮಾಡಿದ್ದಾರೆ.

ಸಮುದಾಯಗಳ ಮೇಲೆ ವೈಷಮ್ಯ ಬೆಳೆಸುವ ಉದ್ದೇಶದಿಂದ ಸಾರ್ವಜನಿಕವಾಗಿ ಪ್ರಚೋದನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ದೂರು ದಾಖಲು ಮಾಡಲಾಗಿದೆ.

ಅ.3 ರಂದು ಸಂಜೆ “ಜೇವರ್ಗಿ ಆಂದೋಲ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಶಹಾಪುರ ಪಟ್ಟಣದಲ್ಲಿ ಶೋಭಾಯಾತ್ರೆ ಯಶಸ್ವಿಯಾಗಿದೆ. ಹಿಂದೂಗಳ ಶೋಭಾಯಾತ್ರೆ ಅಂದರೆ ಅದು ಶಾಂತ ರೀತಿಯಲ್ಲಿ ಕೂಡಿದ ಶೋಭಾ ಯಾತ್ರೆ. ಮುಸ್ಲಿಂರ ರೀತಿಯಲ್ಲಿ ಕಲ್ಲು ಹೊಡೆಯುವ ಶೋಭಾಯಾತ್ರೆ ಅಲ್ಲ. ನಮ್ಮದು ಏನಿದ್ದರೂ ಒಂದೇ ಮಾರೋ ದೋ ತುಕಡಾ ಹಿಂದೂಗಳ ಮೇಲೆ ಹಲ್ಲೆ ನಡೆದರೆ ಕರ್ನಾಟಕ ಎರಡನೇ ಗೋಧ್ರಾ ಆಗುತಿತ್ತು ‘ ಅಂತ ಮಾತಾಡಿದ್ದುಇದೇ’ ಎಂದು ಪಿ.ಐ ಎಸ್.ಎಂ.ಪಾಟೀಲ ದೂರಿನಲ್ಲಿ ತಿಳಿಸಿದ್ದಾರೆ.

ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುವ ಕಾಲಕ್ಕೆ ತೆರೆದ ವಾಹನದಲ್ಲಿ ಕರಣ ಸುಬೇದಾರ, ಕಾಂತು ಪಾಟೀಲ, ಅಡಿವೆಪ್ಪ ಜಾಕಾ, ಶಿವರಾಜ ದೇಶಮುಖಹಾಗೂ ಎಟ್ ಇಬ್ಬರು. ಬಂದೋಬಸ್ತ್‌ಗೆ ನೇಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.

ಶಹಾಪುರ ಠಾಣೆಯ ಪಿಎಸ್ ಐ ಶ್ಯಾಮ ಸುಂದರ ನಾಯಕ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು