ಕಲಬುರಗಿ : ಪಕ್ಷ ಬಿಡುತ್ತಿರುವವರಿಗೆ ಬೂಸ್ಟರ್ ಡೋಸ್ ಕೊಡಬೇಕು ಎಂದು ಸಿಎಂ ಇಬ್ರಾಹಿಂಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ಗೆ ಕೊರೊನಾ ಬಂದಿದೆ ಎನ್ನುವ ಸಿಎಂ ಇಬ್ರಾಹಿಂ ಹೇಳಿಕೆಗೆ ವ್ಯಂಗ್ಯವಾಡಿದ ಖರ್ಗೆ, ದೇಶದ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್ ವ್ಯಾಕ್ಸಿನ್ ಇದ್ದಂತೆ, ಯಾರು ಪಕ್ಷ ಬಿಡುವ ಮಾತು ಹೇಳಿದ್ದಾರೋ ಅವರಿಗೆ ಬೂಸ್ಟರ್ ಡೋಸ್ ಬೇಕಾಗಿದೆ. ಬಿಜೆಪಿ ಎನ್ನುವ ವೈರಸ್ಗೆ ಕಾಂಗ್ರೆಸ್ ವ್ಯಾಕ್ಸಿನ್ ಇದ್ದ ಹಾಗೆ.
ಕಾಂಗ್ರೆಸ್ನಿಂದ ಮಾತ್ರ ದೇಶದ ಎಲ್ಲ ಸಮಸ್ಯೆಗೆ ಪರಿಹಾರ ಸಾಧ್ಯ. ಬಡತನಕ್ಕೂ ಕಾಂಗ್ರೆಸ್ ವ್ಯಾಕ್ಸಿನ್ ಬೇಕು, ರೈತರಿಗೂ ಕಾಂಗ್ರೆಸ್ ವ್ಯಾಕ್ಸಿನ್ ಬೇಕು, ಕಾರ್ಮಿಕರ, ಮಹಿಳೆಯರ ಸುರಕ್ಷತೆಗೂ ನಮ್ಮದೇ ವ್ಯಾಕ್ಸಿನ್ ಬೇಕು ಎಂದರು.
ದೇಶದ ಎಲ್ಲಾ ಸಮಸ್ಯೆಗಳಿಗೂ ಕಾಂಗ್ರೆಸ್ ವ್ಯಾಕ್ಸಿನ್ ಇದ್ದಂತೆ. ಯಾರು ಎಲ್ಲಿಗೆ ಹೋದರೂ ಪಕ್ಷವೇನೂ ಕುಸಿದು ಹೋಗಲ್ಲ, ಜೆಡಿಎಸ್ಗೆ ಹೋಗಲು ರೆಡಿಯಾಗಿದ್ದರೆ. ಅದು ಅವರಿಗೆ ಬಿಟ್ಟ ವಿಚಾರ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.