News Karnataka Kannada
Saturday, May 04 2024
ಬೀದರ್

‘ನಿಗರಾಣಿ’ ಭಿತ್ತಿಪತ್ರ ಅನಾವರಣ: ಪುಲ್ವಾಮಾ ದಾಳಿಯ ಯೋಧರಿಗೆ ನಮನ

ಪುಲ್ವಾಮಾ ದಾಳಿಯ ದುರಂತದಲ್ಲಿ ಮೃತರಾದ ಹುತಾತ್ಮ ಯೋಧರ ಸೇವೆಯನ್ನು ಈ ದೇಶದ ಮಕ್ಕಳಲು ಎಂದೂ ಮರೆಯಬಾರದು, ನಮ್ಮ ದೇಶ ಹಿಂದೆಂದಿಗಿಂತಲೂ ಈಗ ಬಲಿಷ್ಠವಾಗಿದ, ೨೦೧೯ರ ಫೆಬ್ರವರಿ ೧೪ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ನಮ್ಮ ಸೇನೆಯ ೪೦ ಜನ ಬಲಿಯಾದರು, ಅವರ ಕುಟುಂಬ ಹಾಗೂ ನಮ್ಮ ದೇಶ ಈ ಮಹಾನ್ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತಿದೆ, ನಾವೆಲ್ಲರೂ ದೇಶ ಸೇವೆಗೆ ಮುಂದಾಗಬೇಕು ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್.ಅಧಿಕಾರಿ ಹಾಗೂ ನಿವೃತ್ತ ಯೋಧ ಅರುಣ ಮೊಕಾಶಿ ಹೇಳಿದರು.
Photo Credit : News Kannada

ಬೀದರ್: ಪುಲ್ವಾಮಾ ದಾಳಿಯ ದುರಂತದಲ್ಲಿ ಮೃತರಾದ ಹುತಾತ್ಮ ಯೋಧರ ಸೇವೆಯನ್ನು ಈ ದೇಶದ ಮಕ್ಕಳಲು ಎಂದೂ ಮರೆಯಬಾರದು, ನಮ್ಮ ದೇಶ ಹಿಂದೆಂದಿಗಿಂತಲೂ ಈಗ ಬಲಿಷ್ಠವಾಗಿದ, ೨೦೧೯ರ ಫೆಬ್ರವರಿ ೧೪ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ನಮ್ಮ ಸೇನೆಯ ೪೦ ಜನ ಬಲಿಯಾದರು, ಅವರ ಕುಟುಂಬ ಹಾಗೂ ನಮ್ಮ ದೇಶ ಈ ಮಹಾನ್ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತಿದೆ, ನಾವೆಲ್ಲರೂ ದೇಶ ಸೇವೆಗೆ ಮುಂದಾಗಬೇಕು ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್.ಅಧಿಕಾರಿ ಹಾಗೂ ನಿವೃತ್ತ ಯೋಧ ಅರುಣ ಮೊಕಾಶಿ ಹೇಳಿದರು.

ಅವರು ಇಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಪುಲ್ವಾಮಾ ದಾಳಿಯ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿ ಮಾತನಾಡುತ್ತಿದ್ದರು.

ನಿಗರಾಣಿ ಭಿತ್ತಿಪತ್ರ ಅನಾವರಣ :

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ‘ನಿಗರಾಣಿ’ ಯೋಜನೆಯ ಭಿತ್ತಿಪತ್ರವನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿ ಪ್ರಾಚಾರ್ಯರಾದ ಮಲ್ಲಿಕಾರ್ಜುನ್ ಬಿ.ಆರ್. ಅವರು ಅನಾವರಣ ಮಾಡಿ ಪೊಲೀಸ್ ಇಲಾಖೆಗೆ ನಮ್ಮ ಸಂಸ್ಥೆಯ ಉಪನ್ಯಾಸಕರಾದ ಶಿವಕುಮಾರ ಕಟ್ಟೆಯವರು ಸೂಚಿಸಿರುವ ಹೆಸರನ್ನು ಆಯ್ಕೆ ಮಾಡಿಕೊಂಡಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ಹೇಳಿದರು.

ಮತದಾನದ ಪ್ರತಿಜ್ಞೆ :

ಉಪನ್ಯಾಸಕರಾದ ಶಿವಕುಮಾರ ಕಟ್ಟೆಯವರು ಮತದಾನ ಜಾಗೃತಿಯ ಬಗ್ಗೆ ಮಾತನಾಡಿ ಕಾಲೇಜಿನಲ್ಲಿ ೧೮ ವರ್ಷ ತುಂಬಿರುವ ಎಲ್ಲ ವಿಧ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಮತ್ತು ಕಡ್ಡಾಯವಾಗಿ ಎಲ್ಲರೂ ಮತ ಚಲಾಯಿಸಬೇಕೆಂದು ಹೇಳಿದರು.

ಚುನಾವಣಾ ಆಯೋಗ ನೀಡಿರುವ ಮತದಾರರ ಪ್ರತಿಜ್ಞಾ ವಿಧಿಯನ್ನು ಎಲ್ಲರಿಗೂ ಬೋಧಿಸಿದರು. ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯು ಇದೇ ಫೆಬ್ರವರಿ ೨೬ ಮತ್ತು ೨೭ ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಮಹಾಉದ್ಯೋಗ ಮೇಳಕ್ಕೆ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಭೀಮಣ್ಣ ಅವರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು