News Karnataka Kannada
Friday, May 10 2024
ಮನರಂಜನೆ

ಬಸವ ಉತ್ಸವದಲ್ಲಿ ಸಂಗೀತ ರಸದೌತಣ ಉಣಬಡಿಸಿದ ಕಲಾವಿದರು

Artistes who performed musical extravaganza at Basava Festival
Photo Credit : News Kannada

ಬೀದರ್,ಮಾ.12: ಬಸವ ಉತ್ಸವ-2023ರ ಅಂಗವಾಗಿ ಬಸವಕಲ್ಯಾಣದ ಥೇರ ಮೈದಾನದ ಮುಖ್ಯ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಹಲವಾರು ಸಂಸ್ಕೃತಿಕ ಕಾರ್ಯಕ್ರಮಗಳಾದ ವಚನ ಗಾಯನ, ಬಸವಣ್ಣನವರ ವಚನ ನೃತ್ಯ, ಹಾರ್ಮೋನಿಯಂ ಸೋಲೋ, ಬಸವಣ್ಣನವರ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳಿಂದ ಆಕರ್ಷಕವಾಗಿ ಪ್ರದರ್ಶನ ನೀಡಿದವು.

ಶಿವಾನಂದ ಮಂದೇವಾಲ ಅವರು ವಚನ ಗಾಯನ ನೀಡಿದರು. ನಾಗಭೂಷಣ ಮತ್ತು ತಂಡ ಬೆಂಳೂರು ಇವರ ವೇದಪ್ರೀಯ ಶಿವನಲ್ಲ ನಾದಪ್ರೀಯ ಶಿವನಲ್ಲ, ಭಕ್ತಿಪ್ರೀಯ ನಮ್ಮ ಕೂಡಲ ಸಂಗಮ ದೇವ ಎಂಬ ಗೀತ ಗಾಯನ ಆಕರ್ಷಕವಾಗಿತ್ತು. ರಾಜೇಂದ್ರಸಿಂಗ ಪವಾರ ಮತ್ತು ತಂಡದಿಂದ ಹಾರ್ಮೋನಿಯಮ್ ಸೋಲೋ ನಡೆಸಿಕೊಟ್ಟರು. ರಾಮಲು ಗಾದಗಿ ತಂಡದಿಂದ ಬಸವಣ್ಣನವರು ಕುರಿತು ವಚನ ಗಾಯನ ನೀಡಿದರು. ರೇಖಾ ಅಪ್ಪಾರಾವ ಸೌದಿ ಮತ್ತು ಸಂಗಡಿಗರಿಂದ ಕೂಡಲ ಸಂಗಮ ದೇವ, ಈ ಕನ್ನಡ ಹೆಣ್ಣನ್ನು ಮರಿಬೇಡ, ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ, ಕರುನಾಡ ತಾಯಿ ಸದಾ ಚಿನ್ಮಯಿ, ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಸುಮಧುರವಾಗಿ ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಗಾಯಕರಾದ ರಘು ದೀಕ್ಷಿತ ಅವರ ಸೋರುತಿಹದು ಮನೆಯ ಮಾಳಿಗೆ, ಕೊಡಗನ ಕೋಳಿ ನುಂಗಿತ್ತಾ ಸೇರಿದಂತೆ ಇತರೆ ಹಾಡುಗಳಿಗೆ ಬಸವಕಲ್ಯಾಣ ಜನತೆ ತಲೆದೂಗುವಂತೆ ಮಾಡಿದರು. ಹೀಗೆ ಹಲವಾರು ಕಲಾವಿದರು ಸಂಸ್ಕೃತಿಕ ರಸದೌತಣವನ್ನು ಬಸವಕಲ್ಯಾಣದ ಜನತೆಗೆ ಉಣಬಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು