ಬೀದರ್ : ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೆ ಅಬಕಾರಿ ಇಲಾಖೆಯ ಪೊಲೀಸರಿಂದ ಗಡಿ ಬೀದರ್ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಬೀದರ್ ತಾಲೂಕಿನ ಖಾಶಂಪೂರ್( ಸಿ), ಕಮಠಾಣಾ, ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಅಂಗಡಿ ಮತ್ತು ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 181 ಲೀಟರ್ ಮಧ್ಯ ಹಾಗೂ 8 ಲೀಟರ್ ಬೀಯರ್ ಜೊತೆಗೆ ಹೀರೋ ಹೊಂಡಾ ಬೈಕ್ ಸೇರಿದಂತೆ ಒಟ್ಟು 1,50,000 ಸಾವಿರ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ.
ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ಹಣಮಂತ ಗುತ್ತೆದಾರ, ಜಟ್ಟೆಪ್ಪಾ ಬೆಲೂರ್, ರಮೇಶ್ ಬಿರಾದಾರ, ಪಂಡಿತ ಗೋಪಾಳೆ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.