ಬೀದರ: ಬೀದರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭಾಜಪಾ ಅಭ್ಯರ್ಥಿಯಾದ ಈಶ್ವರಸಿಂಗ್ ಠಾಕೂರ ಅವರು ಬೀದರ ನಗರದ ಲೇಬರ್ ಕಾಲೋನಿ ಹಾಗೂ ಎಲ್ಐಜಿ ಕಾಲೋನಿಯಲ್ಲಿ ಪಾದಯಾತ್ರೆ ಮುಖಾಂತರ ಕೇಂದ್ರ ಹಾಗೂ ರಾಜ್ಯದ ಜನಪರ ಅಭಿವೃದ್ಧಿ ಯೋಜನೆ ಸಮರ್ಥಿಸಿ ಭಾಜಪಾಕ್ಕೆ ಮತ ನೀಡಬೇಕೆಂದು ಮತಯಾಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಜಕುಮಾರ ಚಿದ್ರಿ, ನಗರ ಘಟಕದ ಅಧ್ಯಕ್ಷರಾದ ಶಶಿ ಹೊಸಳ್ಳಿ, ನಗರ ಘಟಕದ ಉಪಾಧ್ಯಕ್ಷರಾದ ಸುಭಾಷ ಮಡಿವಾಳ, ರೋಷನ ವರ್ಮಾ, ನವೀನ ಚಿಟ್ಟಾ, ಗಣೇಶ ಭೋಸ್ಲೆ ಹಾಗೂ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕರಾದ ದತ್ತು ಬಾಚೆಪಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.